Advertisement

ಪ್ಲಾಸ್ಟಿಕ್‌ ಜಾಗೃತಿ: ಕೋಲ್ಕತಾದಿಂದ ಸೈಕಲ್‌ ಯಾತ್ರೆ

10:47 AM Sep 06, 2022 | Team Udayavani |

ಕುಂದಾಪುರ: ಕೋಲ್ಕತಾದ ಹಲ್ದಿ ಎಂಬ ಊರಿನ ಯುವಕ ಪ್ಲಾಸ್ಟಿಕ್‌ ನಿರ್ಮೂಲನೆಗಾಗಿ ಸೈಕಲ್‌ನಲ್ಲಿ ಅಭಿಯಾನ ಹೊರಟು ತಿರುಗುತ್ತಿದ್ದಾರೆ.

Advertisement

ಪಶ್ಚಿಮ ಬಂಗಾಲದ ಪುರ್ಬಾ ಮೇದಿನಿ ನಗರದ ಕಾಂಚನನಗರ ಗ್ರಾಮದ ಬಡ ರಿಕ್ಷಾ ಚಾಲಕ ಆಶಿಕ್‌ ಅವರು ಸ್ವಚ್ಛ ಭಾರತ ಹಾಗೂ ಪ್ಲಾಸ್ಟಿಕ್‌ ಮುಕ್ತ ಭಾರತಕ್ಕಾಗಿ, ದೇಶದ ಜನರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ಮಾಡುವ ಸಲುವಾಗಿ ಒಂಟಿಯಾಗಿ ಸೈಕಲ್‌ ತುಳಿಯುತ್ತಿದ್ದಾರೆ. ಲಡಾಕ್‌ ಸೇರಿ ತಮಿಳುನಾಡು, ಆಂಧ್ರಪ್ರದೇಶ, ಕೇರಳ, ಕರ್ನಾಟಕ ರಾಜ್ಯದ ವಿವಿಧೆಡೆ ಪರ್ಯಟನೆ ಮಾಡಿ ಕುಂದಾಪುರ ಮೂಲಕ ಸಾಗಿದ್ದಾರೆ. ವೃತ್ತಿಯಲ್ಲಿ ಬಟ್ಟೆ ಡಿಸೈನರ್‌ ಆಗಿದ್ದು ನಮ್ಮ ಊರಿನಲ್ಲಿ ಒಬ್ಬ ವ್ಯಕ್ತಿ ಇದೆ ರೀತಿಯಲ್ಲಿ ಸೈಕಲ್‌ನಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿದ್ದಾರೆ. ಅದೇ ನನಗೆ ಪ್ರೇರಣೆ ಎಂದು ಹೇಳಿದರು. ಸಾರ್ವಜನಿಕ ಗಣೇಶೋತ್ಸವ ಪ್ರಸಾದ ಸ್ವೀಕರಿಸಿ, ದೇವರು ಒಬ್ಬರೇ ಎಂಬ ನಂಬಿಕೆ ಇದೆ ಎಂದರು.

ಪ್ಲಾಸ್ಟಿಕ್‌ ನಿರ್ಮೂಲನೆ ಬಗ್ಗೆ ಸೈಕಲ್‌ ಸುತ್ತಲೂ ಕಾಗದ ಪ್ರಕಟನೆ ಹಾಕಿದ್ದಾರೆ. ಸ್ವಾತಂತ್ರ್ಯದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ಸೈಕಲ್‌ಗೆ ರಾಷ್ಟ್ರ ಧ್ವಜ ನೆಟ್ಟಿದ್ದಾರೆ. ದಿನಕ್ಕೆ 30 ಕಿ. ಮೀ. ಹೋಗುತ್ತಾರೆ. ಜನ ಪ್ರೀತಿಯಿಂದ ಏನಾದರೂ ಕೊಟ್ಟರೆ ಸ್ವೀಕರಿಸುತ್ತಾರೆ. ದೇಹ ದಂಡಿಸಿ ಕಠಿನ ಪರಿಶ್ರಮ ಪಟ್ಟು ಅರಿವು ಮೂಡಿಸುವ ಪ್ರಯತ್ನ ಶ್ಲಾಘನೀಯ ಎಂದು ಸಾರ್ವಜನಿಕರು ಅವರನ್ನು ಮಾತನಾಡಿಸುತ್ತಿದ್ದುದು ಕಂಡು ಬಂತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next