Advertisement

ಸೋಂಕು ಹರಡುವ ಸರಪಣಿ ತುಂಡರಿಸುವ ರೀತಿಯಲ್ಲಿ ಮುಂದಿನ ಕ್ರಮ: ಸಚಿವ ಆರ್ ಅಶೋಕ್

06:11 PM Jul 01, 2020 | keerthan |

ಚಿಕ್ಕಮಗಳೂರು: ಕೇವಲ ಲಾಕ್ ಡೌನ್ ಮಾಡಿದರೆ ಸೋಂಕು ಪ್ರಕರಣಗಳು ಕಡಿಮೆಯಾಗುವುದಿಲ್ಲ. ಲಾಕ್ ಡೌನ್ ತೆರವಿನ ನಂತರ ಮತ್ತೆ ಹಚ್ಚಾಗುತ್ತದೆ. ಆದರೆ ಸೋಂಕು ಹರಡುವ ಸರಪಣಿ ತುಂಡರಿಸುವ ರೀತಿಯಲ್ಲಿ ಮುಂದಿನ ಕ್ರಮ ಕೈಗೊಳ್ಳಲಿದ್ದೇವೆ ಎಂದು ಸಚಿವ ಆರ್ ಅಶೋಕ್ ಹೇಳಿದ್ದಾರೆ.

Advertisement

ಜಿಲ್ಲೆಯಲ್ಲಿ ಮಾತನಾಡಿದ ಅವರು, ಲಾಕ್ ಡೌನ್ ಮಾಡಿ ಸೋಂಕು ಕಂಟ್ರೋಲ್ ಮಾಡುತ್ತೇವೆ ಎನ್ನುವುದು ಕನಸಿನ ಮಾತು. ಆರಂಭದಲ್ಲಿ ನಾವು ಲಾಕ್ ಡೌನ್ ಮಾಡಿದ್ದೀವಿ. ಆಗ ರಾಜ್ಯದಲ್ಲಿ ಸೋಂಕು ಪ್ರಕರಣಗಳು ಕಡಿಮೆ ಆಗಿತ್ತು.  ಲಾಕ್ ಡೌನ್ ರಿಲ್ಯಾಕ್ಸ್ ಆದಮೇಲೆ ಪ್ರಕರಣಗಳು ಹೆಚ್ಚಾಗುತ್ತಿವೆ. ಮತ್ತೆ ಲಾಕ್ ಡೌನ್ ಮಾಡಿ, ಓಪನ್ ಮಾಡಿದರೂ ಹೀಗೆ ಆಗುತ್ತದೆ ಎಂದರು.

ಮುಂದಿನ ದಿನಗಳಲ್ಲಿ ಸೋಂಕು ಹರಡುವ ಸರಪಣಿ ತುಂಡರಿಸುವ ಕುರಿತು ಯೋಚನೆ ಮಾಡುತ್ತಿದ್ದೇವೆ. ಸದ್ಯ ಎಲ್ಲಾ ಭಾನುವಾರ ಲಾಕ್ ಡೌನ್ ಮಾಡಲು ತೀರ್ಮಾನ ಮಾಡಿದ್ದೇವೆ ಎಂದರು.

ಕೋವಿಡ್ ಸೋಂಕು ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ, ಮುಂದಿನ ಆರು ತಿಂಗಳು ಜನರ ಸೇವೆಗೆ ಸಿದ್ಧರಾಗುವಂತೆ ಅಧಿಕಾರಿಗಳಿಗೆ  ಸೂಚನೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next