Advertisement

Gangavali ನದಿಯಲ್ಲೇ 30 ಟನ್‌ ಗ್ಯಾಸ್‌ ಖಾಲಿಗೊಳಿಸಲು ಯೋಜನೆ!

12:35 AM Jul 18, 2024 | Team Udayavani |

ಕಾರವಾರ: ಅಂಕೋಲಾ ಸಮೀಪದ ಶಿರೂರಿನಲ್ಲಿ ಗುಡ್ಡ ಕುಸಿತ ದುರಂತದ ವೇಳೆ ಗಂಗಾವಳಿ ನದಿಯಲ್ಲಿ ಕೊಚ್ಚಿ ಹೋಗಿರುವ ಟ್ಯಾಂಕರ್‌ನಿಂದ ನದಿಯಲ್ಲೇ ಅಡುಗೆ ಅನಿಲ ಖಾಲಿ ಮಾಡಲು ನಿರ್ಧರಿಸಲಾಗಿದೆ. 19 ಲಕ್ಷ ರೂ. ಮೌಲ್ಯದ ಅಡುಗೆ ಅನಿಲ ನೀರು ಪಾಲಾಗಲಿದೆ!

Advertisement

ಸುಮಾರು 30 ಟನ್‌ ಅನಿಲ ಹೊಂದಿರುವ ಈ ಟ್ಯಾಂಕರ್‌ ದುರಂತ ಸ್ಥಳದಿಂದ 7 ಕಿ.ಮೀ. ದೂರದ ಸಗಡಗೇರಿ ಗ್ರಾಮದ ಬಳಿ ನದಿಯಲ್ಲಿ ತೇಲುತ್ತಿದೆ. ಗುರುವಾರವೇ ಟ್ಯಾಂಕರ್‌ನಿಂದ ಅನಿಲವನ್ನು ವೈಜ್ಞಾನಿಕವಾಗಿ ನೀರಿಗೆ ಸೇರಿಸುವ ಪ್ರಕ್ರಿಯೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ “ಉದಯವಾಣಿ’ಗೆ ತಿಳಿಸಿದರು.

ಮಂಗಳೂರಿನಿಂದ ಆಗಮಿಸಿರುವ ಎಂಆರ್‌ಪಿಎಲ್‌ ಹಾಗೂ ಎಚ್‌ಪಿಸಿಎಲ್‌ನ ತಜ್ಞರು, ನದಿಯಿಂದ ಟ್ಯಾಂಕರ್‌ ತೆರವುಗೊಳಿಸುವ ಯತ್ನಕ್ಕೆ ಮುಂದಾಗಿದ್ದಾರೆ. ಆರಂಭದಲ್ಲಿ ನದಿಯಲ್ಲೇ ಅನಿಲವನ್ನು ವಿಲೀನ ಮಾಡಲು ಜಿಲ್ಲಾಡಳಿತ ಒಪ್ಪಿಗೆ ಸೂಚಿಸದಿದ್ದರೂ ಟ್ಯಾಂಕರನ್ನು ಬದಿಗೆ ತಂದು ಖಾಲಿ ಮಾಡುವುದು ಅಪಾಯಕಾರಿ ಎಂದು ತಜ್ಞರ ತಂಡ ಮನವರಿಕೆ ಮಾಡಿಕೊಟ್ಟ ಬಳಿಕ ಇದಕ್ಕೆ ಅನುಮತಿ ನೀಡಲಾಗಿದೆ.

ಈ ನಡುವೆ ಬುಧವಾರ ಎನ್‌ಡಿಆರ್‌ಎಫ್‌ ತಂಡದವರು ಟ್ಯಾಂಕರ್‌ ಮತ್ತಷ್ಟು ತೇಲಿ ಹೋಗದಂತೆ ಹಗ್ಗ ಹಾಕಿ ಕಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next