Advertisement

ಅಂಪಾಯರ್‌ ತೀರ್ಪಿಗೆ ರೋಹಿತ್‌ ಶರ್ಮ ಅಸಮಾಧಾನ

02:25 PM May 15, 2017 | Team Udayavani |

ಕೋಲ್ಕತಾ: ಕೋಲ್ಕತಾ ಮತ್ತು ಮುಂಬೈ ನಡುವಿನ ಐಪಿಎಲ್‌ ಪಂದ್ಯದಲ್ಲಿ ಮನೀಶ್‌ ಪಾಂಡೆ ಕ್ಯಾಚನ್ನು ಅಂಪಾಯರ್‌ ಔಟ್‌ ಎಂದು ತೀರ್ಪು ನೀಡದಿರುವುದಕ್ಕೆ ರೋಹಿತ್‌ ಶರ್ಮ ಮೈದಾನದಲ್ಲಿಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೊದಲು ಬ್ಯಾಟಿಂಗ್‌ ಮಾಡಿ ಮುಂಬೈ 173 ರನ್‌ ಬಾರಿಸಿತ್ತು. ಗುರಿ ಬೆನ್ನು ಹತ್ತಿದ ಕೋಲ್ಕತಾ ಆರಂಭದಲ್ಲಿ ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆದರೆ ಮನೀಶ್‌ ಪಾಂಡೆ ಉತ್ತಮವಾಗಿ ಆಡುತ್ತಿದ್ದರು. ಮನೀಶ್‌ 22 ರನ್‌ ಬಾರಿಸಿದಾಗ ಮಿಚೆಲ್‌ ಜಾನ್ಸನ್‌ ಬೌಲಿಂಗ್‌ನಲ್ಲಿ ವಿಕೆಟ್‌ ಕೀಪರ್‌ ಅಂಬಾಟಿ ರಾಯುಡುಗೆ ಕ್ಯಾಚ್‌ ನೀಡಿದ್ದರು. ರೋಹಿತ್‌ ಶರ್ಮ ಸೇರಿದಂತೆ ಮುಂಬೈ ಆಟಗಾರರು ಅಂಪಾಯರ್‌ ರವಿ ಔಟ್‌ ಕೊಡುವುದನ್ನು ನೋಡುತ್ತಿದ್ದರು. ಆದರೆ ಅಂಪಾಯರ್‌ ಔಟ್‌ ನೀಡಲಿಲ್ಲ. ಇದಕ್ಕೆ ರೋಹಿತ್‌ ಶರ್ಮ ಅಂಪಾಯರ್‌ ಬಳಿ ತೆರಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next