Advertisement

ಪಿರಿಯಾಪಟ್ಟಣ : ಪಟ್ಟಣದಲ್ಲಿ ಪೊಲೀಸ್ ಮತ್ತು ಅರೆಸೇನಾ ಪಡೆಯಿಂದ ಪಥ ಸಂಚಲನ

07:46 PM Jun 16, 2022 | Team Udayavani |

ಪಿರಿಯಾಪಟ್ಟಣ: ಪಟ್ಟಣದಲ್ಲಿ ಪೊಲೀಸರು ಹಾಗೂ ಅರೆಸೇನಾ ಪಡೆಯ ಸಿಬ್ಬಂದಿಗಳು ಗುರುವಾರ ಪಥ ಸಂಚಲನ ನಡೆಸಿದರು.

Advertisement

ಪಿರಿಯಾಪಟ್ಟಣ ಟೌನ್ ವ್ಯಾಪ್ತಿಯ ಪ್ರಮುಖ ಬೀದಿಗಳಲ್ಲಿ ಹಾಗೂ ಸೂಕ್ಷ್ಮ .ಅತಿ ಸೂಕ್ಷ್ಮ ಪ್ರದೇಶಗಳಲ್ಲಿ ಅರೆಸೇನಾ ಪಡೆ ಹಾಗೂ ಪೊಲೀಸ್ ಠಾಣೆಯ ಸಿಬ್ಬಂದಿಯವರು ಪಥಸಂಚಲನ ಸಾರ್ವಜನಿಕರನ್ನು ಜಾಗೃತಗೊಳಿಸಿದರು.

ಈ ಸಂದರ್ಭದಲ್ಲಿ ಸಿಪಿಐ ಜಗದೀಶ್ ಮಾತನಾಡಿ ಜನ ಸಾಮಾನ್ಯರ ರಕ್ಷಣೆ ಹಾಗೂ ಜನಸಾಮಾನ್ಯರೊಂದಿಗೆ ಪೊಲೀಸ್ ಇಲಾಖೆ ಯಾವಾಗಲೂ ಜೊತೆಗಿರುತ್ತದೆ. ಚುನಾವಣೆ ಸಂದರ್ಭ ಸಾರ್ವಜನಿಕರಿಗೆ ಧೈರ್ಯ ತುಂಬಿ, ಚುನಾವಣಾ ಜಾಗೃತಿ ಮೂಡಿಸುವ, ಕೆಲವೊಮ್ಮೆ ಸಮಾಜಘಾತುಕ ಶಕ್ತಿಗಳು ಜನತೆಯನ್ನು ಗೊಂದಲಕ್ಕೀಡು ಮಾಡುವ ಹಾಗೂ ಶಾಂತಿಸುವ್ಯವಸ್ಥೆ ಭಂಗ ತರಲು ಯತ್ನಿಸುತ್ತವೆ ಅದಕ್ಕಾಗಿಜನತೆಯಲ್ಲಿ ಜಾಗೃತಿ ಮೂಡಿಸಲು ಇಂಥ ಪಥ ಸಂಚಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತದೆ ಎಂದರು.

ಇದನ್ನೂ ಓದಿ : ಕೊಡಗಿನಲ್ಲಿ ಕಳ್ಳರ ಭಯ : ವೃದ್ಧರ ಮನೆಗಳೇ ಟಾರ್ಗೆಟ್‌ ; ತನಿಖಾ ತಂಡ ರಚನೆ

ಪಟ್ಟಣದ ಬಸವೇಶ್ವರ ವೃತ್ತದಿಂದ ಪ್ರಾರಂಭವಾದ ಪಥ ಸಂಚಲನ ಮುಖ್ಯರಸ್ತೆ ಮಾರ್ಗವಾಗಿ ಪ್ರಮುಖ ರಸ್ತೆಗಳಲ್ಲಿ ಸಾಗಿ ನಂತರ ಪೊಲೀಸ್ ಠಾಣೆಯ ಬಳಿ ಕೊನೆಗೊಂಡಿತು.
ಈ ಸಂದರ್ಭದಲ್ಲಿ ಸಬ್ ಇನ್ಸ್ ಪೆಕ್ಟರ್ ಗಳಾದ ಪುಟ್ಟರಾಜು ಗೋವಿಂದರಾಜು. ಸುರೇಶ್, ಸಿಬ್ಬಂದಿಗಳಾದ ಚಿಕ್ಕನಾಯಕ, ವೀರೇಂದ್ರ ಕುಮಾರ್, ಅನಂತ ಹಾಗೂ ಇತರರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next