Advertisement

ಪಿರಿಯಾಪಟ್ಟಣ : ಸಾಲಬಾದೆ ತಾಳಲಾರದೆ ವಿದ್ಯುತ್ ತಂತಿ ಹಿಡಿದು ಆತ್ಮಹತ್ಯೆಗೆ ಶರಣಾದ ರೈತ

10:19 PM May 29, 2022 | Team Udayavani |

ಪಿರಿಯಾಪಟ್ಟಣ : ರೈತನೊಬ್ಬ ಸಾಲಬಾದೆ ತಾಳಲಾರದೆ ವಿದ್ಯುತ್ ತಂತಿ ಹಿಡಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

Advertisement

ಪಿರಿಯಾಪಟ್ಟಣ ತಾಲೂಕಿನ ಕೆಲ್ಲೂರು ಗ್ರಾಮದ ಮಂಜುನಾಥ್ (47) ಬಿನ್ ನಾಗೇಗೌಡ ಎಂಬಾತನೆ ಸಾವಿಗೀಡಾಗಿರುವಾತ, ಈತನಿಗೆ 2.16 ಎಕರೆ ಜಮೀನಿದ್ದು ಈತ ಕೆಲ್ಲೂರು ಪಿಎಸ್‌ಎಸ್‌ಎನ್‌ಬಿ ಸೇರಿದಂತೆ ಇತರಕಡೆಗಳಲ್ಲಿ ಒಟ್ಟು 8 ಲಕ್ಷದಷ್ಟು ಸಾಲ ಮಾಡಿದ್ದು ಈ ಹಿಂದೆ ಬೆಳೆ ಸರಿಯಾಗಿ ಬಾರದೆ ನೋವು ನಷ್ಟ ಅನುಭವಿಸಿದ್ದ, ಸಾಲತೀರಿಸಲು ಆಗದೆ ಮನನೊಂದಿದ್ದ ಈತ ಮೇ. 29 ರಂದು ತನ್ನ ಜಮೀನಿನಲ್ಲಿ ಹಾದುಹೋಗಿದ್ದ ವಿದ್ಯುತ್‌ತಂತಿಯನ್ನು ತಾನೆ ಹಿಡಿದುಕೊಂಡು ಸಾವನಪ್ಪಿದ್ಧಾನೆ ಎಂದು ಪ್ರತ್ಯಕ್ಷ ದರ್ಶಿ ಆತನ ಹೆಂಡತಿ ನೇತ್ರಾವತಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ಧಾರೆ.

ಈ ಸಂಬಂದ ಪಿರಿಯಾಪಟ್ಟಣಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ಧಾರೆ.

ಇದನ್ನೂ ಓದಿ : ರಾಯರ ಕೃಪೆ, ಅವರ ಪವಾಡಕ್ಕೆ ಧನ್ಯ : ರಾಜ್ಯಸಭೆ ಟಿಕೆಟ್ ಸಿಕ್ಕ ಖುಷಿಯಲ್ಲಿ ಜಗ್ಗೇಶ್

Advertisement

Udayavani is now on Telegram. Click here to join our channel and stay updated with the latest news.

Next