Advertisement

ಪಿರಿಯಾಪಟ್ಟಣ : ಶೀಲ ಶಂಕಿಸಿ ಪತ್ನಿಯನ್ನೇ ಕೊಲೆಗೈದು ಜಮೀನಿನಲ್ಲಿ ಎಸೆದು ಪರಾರಿಯಾದ ಪತಿ

07:27 PM May 15, 2022 | Team Udayavani |

ಪಿರಿಯಾಪಟ್ಟಣ : ಶೀಲ ಶಂಕಿಸಿ ಪತಿಯೇ ತನ್ನ ಪತ್ನಿಯನ್ನು ಕೊಲೆ ಮಾಡಿ ಪಕ್ಕದ ಜಮೀನಿನಲ್ಲಿ ಎಸೆದು ಪರಾರಿಯಾಗಿರುವ ಘಟನೆ ತಾಲೂಕಿನ ಸತ್ಯಗಾಲ ಬಿ ಕಾವಲ್ ನಲ್ಲಿ ಶನಿವಾರ ರಾತ್ರಿ ನಡೆದಿದೆ.

Advertisement

ತಾಲೂಕಿನ ಸತ್ಯಗಾಲ ಬಿ ಕಾವಲ್ ನ ನಿವಾಸಿ ಲಕ್ಷ್ಮಿ ಮೃತ ಮಹಿಳೆ, ಈಕೆಯ ಪತಿ ಚಂದ್ರು ಎಂಬಾತನೇ ಕೊಲೆ ಮಾಡಿರುವ ಆರೋಪಿ.

ಕಳೆದ ಹನ್ನೆರಡು ವರ್ಷಗಳ ಹಿಂದೆ ಚಂದ್ರು, ಲಕ್ಷ್ಮಿಯನ್ನು ಪ್ರೀತಿಸಿ ಮದುವೆಯಾಗಿದ್ದ ಇವರಿಗೆ ಇಬ್ಬರು ಮಕ್ಕಳಿದ್ದಾರೆ.

ಮದುವೆಯಾದ ದಿನದಿಂದ ಅನ್ಯೋನ್ಯವಾಗಿದ್ದ ಗಂಡ ಹೆಂಡತಿ, ಕಳೆದ ಐದು ವರ್ಷದಿಂದ ತನ್ನ ಪತ್ನಿ ಫೋನ್ ನಲ್ಲಿ ಅವರಿವರ ಜೊತೆ ಮಾತನಾಡುತ್ತಿದ್ದಾಳೆ ಎಂದು ಅನುಮಾನಗೊಂಡ ಪತಿ ಶನಿವಾರ ರಾತ್ರಿ ಪತ್ನಿಯನ್ನು ಕೊಲೆ ಮಾಡಿ ಬಳಿಕ ಶವವನ್ನು ಜಮೀನಿನಲ್ಲಿ ಎಸೆದು ಪರಾರಿಯಾಗಿದ್ದಾನೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಮೈಸೂರಿನ ಕೆಆರ್ ಆಸ್ಪತ್ರೆಗೆ ರವಾನಿಸಲಾಗಿದೆ ಈ ಸಂಬಂಧ ಆರಕ್ಷಕ ವೃತ್ತ ನಿರೀಕ್ಷಕ ಜಗದೀಶ್ ಎಸ್ ಐ ಪುಟ್ಟರಾಜು ಪೇದೆಗಳಾದ ಅಸ್ಲಮ್ ಪಾಶ ಸುರೇಶ್ ಮುಂತಾದವರು ಆರೋಪಿ ಪತ್ತೆಗೆ ಶೋಧ ನಡೆಸುತ್ತಿದ್ದಾರೆ.

Advertisement

ಇದನ್ನೂ ಓದಿ : ಗೋವಾ ಗ್ರಾ.ಪಂ.ಚುನಾವಣೆ; ಕನ್ನಡ ಅಭ್ಯರ್ಥಿಗಳ ಪ್ಯಾನಲ್ : ವಿವಾದಕ್ಕೆ ಗುರಿ

Advertisement

Udayavani is now on Telegram. Click here to join our channel and stay updated with the latest news.

Next