Advertisement

ತಾಯಿ ಸಾವಿನಿಂದ ಮನನೊಂದ ಮಗ ಕೆರೆಗೆ ಹಾರಿ ಆತ್ಮಹತ್ಯೆ

07:21 PM Sep 16, 2021 | Team Udayavani |

ಪಿರಿಯಾಪಟ್ಟಣ:  ತಾಯಿ ಸಾವನ್ನಪ್ಪಿದ ದುಃಖದಲ್ಲಿಯೇ ಮಗನು ಕೆರೆಗೆ ಹಾರಿ ಪ್ರಾಣಬಿಟ್ಟಿರುವ ಮನಃಕಲಕುವ ಘಟನೆ ಜರುಗಿದೆ.

Advertisement

ಪಟ್ಟಣದ ಪೋಸ್ಟ್ ಆಫೀಸ್ ರಸ್ತೆ ನಿವಾಸಿ ನಿವೃತ್ತ ಬಿಎಸ್‌ಎನ್‌ಎಲ್ ನೌಕರ ಬಿಜೆಪಿ ಮುಖಂಡ ಪುಟ್ಟಸ್ವಾಮಿ ಅವರ ಮಗ ಬಿ.ಪಿ.ಅರ್ಜುನ್ (29) ಆತ್ಮಹತ್ಯೆ ಮಾಡಿಕೊಂಡವ. ಈತನ ಶವ ಗುರುವಾರ ಸಂಜೆ ಪಟ್ಟಣದ ಅರಸನ ಕೆರೆಯ ಸೇತುವೆ ಬಳಿ ಪತ್ತೆಯಾಗಿದೆ.

ಸೆ.15ರಂದು ಈತನ ತಾಯಿ ಎಸ್.ಸುಜಾತ ಹೃದಯಾಘಾತದಿಂದ ನಿಧನರಾಗಿದ್ದರು. ತಾಯಿ ಶವಸಂಸ್ಕಾರವನ್ನು ಬಾರಸೆಯಲ್ಲಿ ಮುಗಿಸಿ ಬಂದ ಅರ್ಜುನ್ ತೀವ್ರವಾಗಿ ಮನನೊಂದಿದ್ದು ವಾಟ್ಸ್ ಅಪ್‌ಸ್ಟೇಟ್ಸ್ನಲ್ಲಿ ತಾಯಿಯ ಜೋತೆ ತಾನು ಇಲ್ಲ ಎಂಬಂತೆ ಸ್ಟೇಟ್ಸ್ ಹಾಕಿದ್ದನೆಂದು ಸ್ನೇಹಿತರು ತಿಳಿಸಿದ್ಧಾರೆ.

ತಾಯಿಯ ಸಾವಿನ ದುಃಖ ತಡೆಯದೆ ತೀವ್ರ ಮನನೊಂದಿದ್ದ ಈತ ಸಂಜೆ ಮನೆಗೆ ಬಾರದೆ ಇರುವುದನ್ನು ಕಂಡು ಸೆ.16ರಂದು ತಂದೆ ಬಿ.ಎಲ್.ಪುಟ್ಟಸ್ವಾಮಿ ಮತ್ತು ಕುಟುಂಬದವರು ಈತನಿಗಾಗಿ ಹುಡುಕಾಟ ನಡೆಸಿದ್ಧಾರೆ. ಈ ವೇಳೆ ಬಿ.ಪಿ.ಅರ್ಜುನ್ ಮೊಬೈಲ್ ಕೆರೆಯ ಬಳಿ ಸಾರ್ವಜನಿಕರಿಗೆ ದೊರಕಿರುವುದಾಗಿ ಪೊಲೀಸರು ತಿಳಿಸಿದ್ಧಾರೆ. ನಂತರ ಸಂಜೆಯ ವೇಳಗೆ ಅರಸನಕೆರೆ ಮುಖ್ಯ ಸೇತುವೆಯ ಬಳಿ ಶವ ತೇಲುತ್ತಿರುವುದನ್ನು ಕಂಡ ಸಾರ್ವಜನಿಕರು ಪೊಲೀಸರಿಗೆ ಸುದ್ದಿ ತಿಳಿಸಿದ್ದು, ಸ್ಥಳಕ್ಕೆ ಆಗಮಿಸಿದ ಕುಟುಂಬಸ್ಥರು ಇದು ಬಿ.ಪಿ.ಅರ್ಜುನದ್ದೇ ಶವ ಎಂದು ಗುರುತಿಸಿದ್ಧಾರೆ.

ಈ ಸಂಬಂಧ ಪಿರಿಯಾಪಟ್ಟಣ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಶವಾಗಾರಕ್ಕೆ ಸಾಗಿಸಿದ್ಧಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next