Advertisement

ಎಲ್ಕೆಜಿಗೆ ಲಾಟರಿ ಎತ್ತಿ ಮಕ್ಕಳ ಆಯ್ಕೆ

08:25 AM Jun 07, 2019 | Team Udayavani |

ಹುಳಿಯಾರು: ಇಲ್ಲಿನ ಕರ್ನಾಟಕ ಪಬ್ಲಿಕ್‌ ಶಾಲೆಯ ಸರ್ಕಾರಿ ಎಲ್ಕೆಜಿಗೆ ಲಾಟರಿ ಎತ್ತುವ ಮೂಲಕ ಮಕ್ಕಳ ಆಯ್ಕೆ ಮಾಡಲಾಯಿತು. ಆಯ್ಕೆಯಾದವರು ಖುಷಿ ಪಟ್ಟರೆ, ಆಯ್ಕೆಯಾಗದವರು ನಿರಾಸೆಯಿಂದ ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತ ಹಿಂದಿರು ಗುವಂತಾಯಿತು.ಹುಳಿಯಾರಿನಲ್ಲಿ ಪ್ರಥಮ ಬಾರಿಗೆ ಕರ್ನಾಟಕ ಪಬ್ಲಿಕ್‌ ಸ್ಕೂಲ್ನಲ್ಲಿ ಸರ್ಕಾರಿ ಎಲ್ಕೆಜಿಗೆ ಮಕ್ಕಳನ್ನು ಸೇರಿಸಲು ಪೋಷಕರು ನೂಕು ನುಗ್ಗಲಿ ನಲ್ಲಿ ಅರ್ಜಿ ಪಡೆದು, ಸಲ್ಲಿಸಿದ್ದರು. 30 ಸೇಟಿಗೆ ಬರೋಬ್ಬರಿ ನೂರಕ್ಕೂ ಹೆಚ್ಚು ಅರ್ಜಿಗಳು ಬಂದಿದ್ದವು. ನಿರೀಕ್ಷೆಗಿಂತ ಹೆಚ್ಚು ಅರ್ಜಿಗಳು ಬಂದಿದ್ದರಿಂದ ಸರ್ಕಾರ ನಿಯಮದಂತೆ ಪೋಷಕರಿಂದಲೇ ಲಾಟರಿ ಮೂಲಕ ಮಕ್ಕಳ ಆಯ್ಕೆ ಮಾಡಲಾಯಿತು.

Advertisement

ಮತ್ತೂಂದು ವಿಭಾಗ ತೆರೆಯಿರಿ: ಆಯ್ಕೆಯಾಗದ ಪೋಷಕರು ಮತ್ತೂಂದು ವಿಭಾಗ ತೆರೆದು ನಮ್ಮ ಮಕ್ಕಳಿಗೂ ಪ್ರವೇಶ ಕೊಡಿ ಎಂದು ಪ್ರಾಚಾರ್ಯ ಪ್ರಸನ್ನ ಕುಮಾರ್‌ ಅವರನ್ನು ಒತ್ತಾಯಿಸಿದರು. ಸರ್ಕಾರಿ ಆದೇಶದಂತೆ 30 ಮಂದಿಗೆ ಮಾತ್ರ ದಾಖ ಲಾತಿಗೆ ವ್ಯವಸ್ಥೆ ಮಾಡಲಾಗಿದೆ. ನಿಮ್ಮ ಅಭಿಪ್ರಾಯ ದಂತೆ ಎಲ್ಲ ಮಕ್ಕಳ ದಾಖಲಾತಿಗೆ ಅವಕಾಶ ಮಾಡಿ ಕೊಡುವಂತೆ ಇಲಾಖೆಗೆ ಪತ್ರ ಬರೆಯುತ್ತೇನೆ ಎಂದು ಅವರು ಪೋಷಕರನ್ನು ಸಮಾಧಾನಪಡಿಸಿದರು. ಈ ಸಂದರ್ಭ 1ನೇ ತರಗತಿಗೂ ಲಾಟರಿ ಮೂಲಕ ಆಯ್ಕೆ ಮಾಡುವಂತೆ ಪೋಷಕರು ಒತ್ತಾಯಿಸಿದರು. ಇಲಾಖೆ ಮೌಖೀಕ ಆದೇಶದಂತೆ 60 ಮಂದಿ ದಾಖಲಾತಿ ನಂತರ ಸ್ಥಗಿತ ಗೊಳಿಸಲಾಗಿದೆ. ಈಗ 30 ಮಂದಿಗೆ ಮಾತ್ರ ಪುಸ್ತಕ, ಬಟ್ಟೆ, ಊಟ ಮತ್ತಿತರ ಇಲಾಖೆ ಸೌಲಭ್ಯ ಸಿಗಲಿದ್ದು, ಉಳಿದವರಿಗೆ ಪೋಷಕರೆ ವೆಚ್ಚ ಭರಿಸಬೇಕು. ಹಾಗಾಗಿ 1ನೇ ತರಗತಿಯ ಬಗ್ಗೆ ಇನ್ನೂ ಸ್ಪಷ್ಟ ಆದೇಶ ಬಂದಿಲ್ಲ. ಬಂದ ನಂತರ ಆದೇಶದಂತೆ ಕ್ರಮ ಕೈಗೊಳ್ಳುವುದಾಗಿ ಹೇಳಿದರು. ಒಟ್ಟಾರೆ ಸರ್ಕಾರಿ ಶಾಲೆಗಳೆಂದರೆ ಮೂಗು ಮುರಿಯುವ ಈ ದಿನಗಳಲ್ಲಿ ಸರ್ಕಾರಿ ಶಾಲೆಗೆ ಸೇರಿಸಲು ಪೋಷಕರ ದಂಡು ಶಾಲೆಯ ಮುಂದೆ ಜಮಾಯಿಸಿದ್ದು ಅಚ್ಚರಿ ಮೂಡಿಸುವಂತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next