Advertisement

ಫೋನಿ ಎಫೆಕ್ಟ್: ಕರಾವಳಿ ಭಾಗದಲ್ಲಿ ಮಳೆ ನಿರೀಕ್ಷೆ

12:02 AM Apr 29, 2019 | sudhir |

ಚೆನ್ನೈ: ಚಂಡಮಾರುತ ಫೋನಿ ನಿರೀಕ್ಷೆಯಂತೆಯೇ ಸಾಗುತ್ತಿದ್ದು, ಸೋಮವಾರ ಹಾಗೂ ಮಂಗಳವಾರ ಕೇರಳ ಹಾಗೂ ತಮಿಳುನಾಡು ಸಹಿತ ಕರಾವಳಿ ಭಾಗಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದರೆ ತಮಿಳುನಾಡಿನ ಕರಾವಳಿಗೆ ಚಂಡಮಾರುತ ಅಪ್ಪಳಿಸುವುದಿಲ್ಲ. ಅಷ್ಟೇ ಅಲ್ಲ, ಕರಾವಳಿಯನ್ನು ದಾಟಿ ಚಂಡಮಾರುತ ಒಳನಾಡಿಗೆ ಬರುವುದೂ ಇಲ್ಲ. ಬಂಗಾಲ ಕೊಲ್ಲಿಯಿಂದಲೇ ಹಾದುಹೋಗಲಿದೆ. ಮೇ 3ರ ವೇಳೆಗೆ ಇದು ಒಡಿಶಾಗೆ ಸಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಕರ್ನಾಟಕದ ದಕ್ಷಿಣ ಒಳನಾಡಿನಲ್ಲೂ ಈ ಚಂಡಮಾರುತದಿಂದಾಗಿ ಮಳೆಯಾಗುವ ಸಾಧ್ಯತೆಯಿದೆ. ತಮಿಳುನಾಡು ಹಾಗೂ ಒಡಿಶಾಗೆ ಅಲರ್ಟ್‌ ಆಗಿರುವಂತೆ ಸೂಚಿಸಲಾಗಿದ್ದು, ಮಧ್ಯಮ ಪ್ರಮಾಣದಿಂದ ತೀವ್ರ ಮಳೆಯಾಗುವ ಸಾಧ್ಯತೆಯಿದೆ. ಅಲ್ಲದೆ, ಗಂಟೆಗೆ 30ರಿಂದ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸಬಹುದಾಗಿದೆ. ಎ. 30ರಂದು 70 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯೂ ಇದೆ. ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಸೂಚಿಸಲಾಗಿದೆ. ಅಷ್ಟೇ ಅಲ್ಲ, ಭೂಕುಸಿತ ಸಂಭವಿಸಬಹುದಾದ ಪ್ರದೇಶಗಳಿಗೆ ತೆರಳದಂತೆಯೂ ನಾಗರಿಕರಿಗೆ ಸೂಚಿಸಲಾಗಿದೆ. ಈ ನಡುವೆ, ಮಾರ್ಚ್‌ನಿಂದ ಎಪ್ರಿಲ್‌ವರೆಗಿನ ಅವಧಿಯಲ್ಲಿ ಮುಂಗಾರು ಪೂರ್ವ ಮಳೆಯ ಪ್ರಮಾಣ ಶೇ. 27ರಷ್ಟು ಕುಂಠಿತ ವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next