Advertisement

ಫೋನ್‌ ಕದ್ದಾಲಿಕೆ: ಪಾಟೀಲ ಆರೋಪ

12:32 PM Nov 07, 2017 | Team Udayavani |

ವಿಜಯಪುರ: “ರಾಜಕೀಯ ಕಾರಣಕ್ಕೆ ನನ್ನ, ನನ್ನ ಕುಟಂಬ ಸದಸ್ಯರು ಹಾಗೂ ಆಪ್ತರ ಫೋನ್‌ ಕದ್ದಾಲಿಕೆ ನಡೆಯುತ್ತಿದೆ. ಇದನ್ನು ಸಿಎಂ ಗಮನಕ್ಕೆ ತಂದಿರುವುದಾಗಿ’ ಜಲ ಸಂಪನ್ಮೂಲ ಸಚಿವ ಡಾ| ಎಂ.ಬಿ. ಪಾಟೀಲ ತಿಳಿಸಿದರು.

Advertisement

ಸೋಮವಾರ ಮಾಧ್ಯಮಗಳಿಗೆ ಈ ವಿಷಯ ತಿಳಿಸಿದ ಅವರು, ನನ್ನ ಫೋನ್‌ ಮಾತ್ರವಲ್ಲ. ನನ್ನ ಪತ್ನಿ, ಇಬ್ಬರು ಪುತ್ರರು ಹಾಗೂ ಆಪ್ತರ ಫೋನ್‌ ಕದ್ದಾಲಿಕೆ ನಡೆಯುತ್ತಿದೆ. ಫೋನ್‌ ಟ್ಯಾಪಿಂಗ್‌ ಆಗುತ್ತಿರುವ ಕುರಿತು ನನ್ನ ಸ್ನೇಹಿತರೊಬ್ಬರು ಗಮನಕ್ಕೆ ತಂದರು. ಕೂಡಲೇ ಈ ಕುರಿತು ಸಿದ್ದರಾಮಯ್ಯ ಅವರ ಗಮನಕ್ಕೆ ತಂದಿದ್ದೇನೆ ಎಂದರು.

ಫೋನ್‌ ಕದ್ದಾಲಿಕೆಗೂ, ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕೂ ಸಂಬಂಧವಿಲ್ಲ. ರಾಜಕೀಯ ಪ್ರೇರಿತ ಇಂಥ ಬೆದರಿಕೆಯಿಂದ ನಾನು ಪ್ರತ್ಯೇಕ ಧರ್ಮ ಹೋರಾಟದಿಂದ ಹಿಂದೆ ಸರಿಯುವುದಿಲ್ಲ. ರಾಜಕೀಯವಾಗಿ ಇಂಥದ್ದನ್ನೆಲ್ಲ ಸಮರ್ಥವಾಗಿ ಎದುರಿಸುವ ಶಕ್ತಿ ಹೊಂದಿದ್ದೇನೆ ಎಂದೂ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next