Advertisement

ಆರ್‌ಎಸ್‌ಎಸ್‌ ಕಾರ್ಯಕರ್ತನ ಕೊಲೆ ಪ್ರಕರಣ: ಮತ್ತೋರ್ವ ಪಿಎಫ್ಐ ಪದಾಧಿಕಾರಿಯ ಸೆರೆ

12:32 AM Nov 24, 2021 | Team Udayavani |

ಪಾಲಕ್ಕಾಡ್‌: ಇತ್ತೀಚೆಗೆ ನಡೆದ ಆರ್‌ಎಸ್‌ಎಸ್‌ ಕಾರ್ಯಕರ್ತನ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಬ್ಬ ಪಿಎಫ್ಐ ಪದಾಧಿಕಾರಿಯನ್ನು ಕೇರಳ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

Advertisement

ಆರ್‌ಎಸ್‌ಎಸ್‌ ಕಾರ್ಯಕರ್ತ 27ರ ಹರೆಯದ ಸುಜಿತ್‌ ಅವರನ್ನು ನ. 15ರಂದು ಪತ್ನಿಯನ್ನು ಕೆಲಸಕ್ಕೆ ಕರೆದುಕೊಂಡು ಹೋಗುತ್ತಿದ್ದಾಗ ಹಾಡಹಗಲೇ ಚೂರಿಯಿಂದ ಇರಿದು ಕೊಲೆಗೈಯ ಲಾಗಿತ್ತು. ಇದಕ್ಕೆ ಸಂಬಂಧಿಸಿ ಈ ಹಿಂದೆಯೇ ಪಾಪ್ಯುಲರ್ ಫ್ರಂಟ್‌ ಆಫ್ ಇಂಡಿಯಾ (ಪಿಎಫ್ಐ) ಪದಾಧಿಕಾರಿಯೋರ್ವನನ್ನು ಬಂಧಿಸಲಾಗಿತ್ತು.

ಮಂಗಳವಾರ ಬಂಧನಕ್ಕೊಳಗಾದ ವ್ಯಕ್ತಿ ಕೊಲೆ ಯಲ್ಲಿ ನೇರವಾಗಿ ಭಾಗಿಯಾಗಿದ್ದಾತ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ತನಿಖೆಯ ದೃಷ್ಟಿ ಯಿಂದ ಆತನ ಹೆಸರು ಮತ್ತು ವಿಳಾಸ ಬಹಿರಂಗ ಪಡಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಮಗನಿಗಾಗಿ ಔಷಧಿ ಸಿದ್ಧಪಡಿಸುವ ಅಪ್ಪ!

ಘಟನೆಗೆ ಸಂಬಂಧಿಸಿ ಎನ್‌ಐಎ ತನಿಖೆ ನಡೆಸಲು ಆಗ್ರಹಿಸಿ ರಾಜ್ಯ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್‌ ಅವರು ದಿಲ್ಲಿಯಲ್ಲಿ ಗೃಹ ಸಚಿವ ಅಮಿತ್‌ ಶಾ ಅವರನ್ನು ಭೇಟಿಯಾಗಿ ನಿನ್ನೆ ಮನವಿ ಸಲ್ಲಿಸಿದ್ದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next