Advertisement

ಗಂಗಾವತಿ: ಪಿಎಫ್ ಐ ಜಿಲ್ಲಾಧ್ಯಕ್ಷನ ಬಂಧನ; ಬೆಂಗಳೂರಿಗೆ ರವಾನೆ

09:15 AM Sep 22, 2022 | Team Udayavani |

ಗಂಗಾವತಿ: ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೊಪ್ಪಳ ಜಿಲ್ಲಾಧ್ಯಕ್ಷ ಅಹ್ಮದ್ ಫಯಾಜ್ ಎಂಬವರನ್ನು ಬೆಂಗಳೂರು ಜಿಲ್ಲೆಯ ಪೊಲೀಸರ ಬೇಡಿಕೆ ಅನ್ವಯ ಕೊಪ್ಪಳ ಜಿಲ್ಲೆಯ ಪೊಲೀಸರು ಬಂಧಿಸಿ ಬೆಂಗಳೂರಿಗೆ ರವಾನೆ ಮಾಡಿದ್ದಾರೆ.

Advertisement

ಗುರುವಾರ ಬೆಳಗಿನ ಜಾವ ನಗರ ಪೋಲಿಸ್ ಠಾಣೆಯ ಪೊಲೀಸರು ಅಹ್ಮದ್ ಫಯಾಜಂ ಅವರ ಮನೆಗೆ ತೆರಳಿ ಮನೆಯಲ್ಲಿದ್ದ ಅಹ್ಮದ್ ಫಯಾಜ್ ನನ್ನು ಬಂಧಿಸಿ ಬೆಂಗಳೂರಿಗೆ ಕರೆದುಕೊಂಡು ಹೋಗಿದ್ದಾರೆ.

ಈ ಕುರಿತು ಉದಯವಾಣಿ ಜತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಶು ಗಿರಿ ಮಾತನಾಡಿ, ಬೆಂಗಳೂರು ಜಿಲ್ಲೆಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ಪೊಲೀಸರ ಬೇಡಿಕೆ ಅನ್ವಯ ಅಹ್ಮದ್ ಫಯಾಜ್ ನನ್ನು ಬಂಧಿಸಿ ಬೆಂಗಳೂರಿಗೆ ಕಳಿಸಿಕೊಡಲಾಗಿದೆ. ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ನಮಗೆ ತಿಳಿದು ಬಂದಿಲ್ಲ. ಬೆಂಗಳೂರಿನ ಪೊಲೀಸರ ಬೇಡಿಕೆ ಅನ್ವಯ ಅಹ್ಮದ್ ನನ್ನು  ಬಂಧಿಸಲಾಗಿದೆ ಎಂದು ಎಸ್.ಪಿ. ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next