Advertisement

ಮೂಳೂರು : ಪೆಟ್ರೋಲ್‌ ಪಂಪ್‌ನಲ್ಲಿ ಕಾರು ಚಾಲಕನಿಂದ ಧಾಂದಲೆ ; ಸಿಬಂದಿಗೆ ಹಲ್ಲೆ

11:48 PM Mar 20, 2023 | Team Udayavani |

ಕಾಪು : ರಾಷ್ಟ್ರೀಯ ಹೆದ್ದಾರಿ 66 ಮೂಳೂರು ಭಾರತ್‌ ಪೆಟ್ರೋಲಿಯಂ ಪಂಪ್‌ನಲ್ಲಿ ಫ್ಯೂಯೆಲ್‌ ಹಾಕಿಸಿಕೊಳ್ಳಲು ಬಂದ ಕಾರು ಚಾಲಕನೋರ್ವ ಕ್ಷುಲ್ಲಕ ಕಾರಣಕ್ಕೆ ಧಾಂದಲೆ ನಡೆಸಿ ಸಿಬಂದಿಯ ಮೇಲೆ ಹಲ್ಲೆ ನಡೆಸಿದ ಘಟನೆ ರವಿವಾರ ರಾತ್ರಿ ನಡೆದಿದೆ.

Advertisement

ಕಾರು ಚಾಲಕ ತನ್ನ ಕಾರಿಗೆ ಡಿಸೇಲ್‌ ಹಾಕಿಸಲೆಂದು ಬಂದು ಎರಡು ಸಾವಿರ ರೂಪಾಯಿ ಮೊತ್ತದ ಡೀಸೆಲ್‌ ಹಾಕುವಂತೆ ಹೇಳಿದ್ದನು. ಆ ವೇಳೆ ಪಂಪ್‌ ಸಿಬಂದಿ ಅಂಕಿತ್‌ ಎಂಬಾತ ತಪ್ಪಿ ಪೆಟ್ರೋಲ್‌ ಗನ್‌ಎತ್ತಿದ್ದು ಇದರಿಂದ ಆಕ್ರೋಶಿತನಾದ ಚಾಲಕ ಪೆಟ್ರೋಲ್‌ ಮತ್ತು ಡೀಸೆಲ್‌ ಯುನಿಟ್‌ಗಳಿಗೆ ಕಾಲಿನಿಂದ ತುಳಿದು ಸೆ„ಪಿಂಗ್‌ ಮೆಷೀನ್‌ ಅನ್ನು ಕಿತ್ತುಕೊಂಡು ಒಡೆದು ಹಾಕಿ, ಧಾಂದಲೆ ನಡೆಸಿದ್ದನು.

ಘಟನೆಯನ್ನು ವಿಚಾರಿಸಲು ಬಂದ ಪಂಪ್‌ನ ಸೂಪರ್‌ವೈಸರ್‌ ಪುಷ್ಪರಾಜ್‌ ಎಂಬವರು ನಿಮ್ಮ ಹಣ ಹಿಂದೆ ಹಾಕಿದ್ದೇವೆ ಎಂದರೂ ಕೇಳದೆ ಅವರ ಮೇಲೆ ಹಲ್ಲೆ ನಡೆಸಿರುವುದಾಗಿ ಆರೋಪಿಸಲಾಗಿದೆ. ಹಲ್ಲೆಗೊಳಗಾದ ಸೂಪರ್‌ವೈಸರ್‌ ಪುಷ್ಪರಾಜ್‌ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಈ ಬಗ್ಗೆ ಅಪರಿಚಿತ ಚಾಲಕನ ವಿರುದ್ಧ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next