Advertisement

ಪಾಸ್‌ ಇದ್ದವರಿಗಷ್ಟೇ ಪೆಟ್ರೋಲ್

04:11 PM Mar 31, 2020 | Suhan S |

ಮಂಡ್ಯ: ಕೋವಿಡ್ 19 ತಡೆಗಟ್ಟುವ ಉದ್ದೇಶ ದಿಂದ ಸೋಮ ವಾರ (ಮಾ.30)ದಿಂದ ಏ.14ರವರೆಗೆ ಜಿಲ್ಲಾ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಪೆಟ್ರೋಲ್‌ ಬಂಕ್‌ಗಳಲ್ಲಿ ದ್ವಿಚಕ್ರ ವಾಹನಗಳಿಗೆ ಇಂಧನ ಪೂರೈಸುವುದನ್ನು ಸ್ಥಗಿತಗೊಳಿಸಲಾ ಗಿದೆ ಎಂದು ಡಿಸಿ ಡಾ.ವೆಂಕಟೇಶ್‌ ಹೇಳಿದರು.

Advertisement

ದೇಶಾದ್ಯಂತ ಲಾಕ್‌ಡೌನ್‌ ಘೋಷಿಸಲಾಗಿದ್ದರೂ ಜನರು ವಿನಾಕಾರಣ ಅಗತ್ಯವಸ್ತುಗಳು ಅಥವಾ ಸಂಬಂಧಿಕರ ಮನೆ ಗಳು, ಆಸ್ಪತ್ರೆ, ಸಾವಿನ ನೆಪವೊಡ್ಡಿ ಮನೆಗಳಿಂದ ಹೊರಬಂದು ಸಾಮಾಜಿಕ ಅಂತರ ಕಾಪಾಡದೇ ಲಾಕ್‌ಡೌನ್‌ ಉಲ್ಲಂ ಸುತ್ತಿದ್ದಾರೆ. ಅಲ್ಲದೇ ಕೆಲ ಯುವಕರು ರಸ್ತೆ ಗಿಳಿದು ದ್ವಿಚಕ್ರ ವಾಹನಗಳಲ್ಲಿ ಸುತ್ತುವುದನ್ನು ಚಾಳಿ ಮಾಡಿ ಕೊಂಡಿದ್ದಾರೆ ಎಂದು ತಿಳಿಸಿ ದ್ದಾರೆ. ಕೊರೊನಾ ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ನಿಯೋ ಜನೆಗೊಂಡಿರುವ ಸರ್ಕಾರಿ ಅಧಿಕಾರಿ ಗಳು, ನೌಕರರು, ಅಗತ್ಯ ಸೇವೆ ಒದಗಿಸುವ ಹಾಗೂ ಪತ್ರ ಕರ್ತರ ವಾಹನ ಗಳನ್ನು ಹೊರತು ಪಡಿಸಿ ಉಳಿದ ಯಾವುದೇ ವಾಹನ ಗಳಿಗೆ ಪೆಟ್ರೋಲ್‌ ನೀಡದಂತೆ ಸೂಚಿಸಿದ್ದಾರೆ. ಪೆಟ್ರೋಲ್‌ ಬಂಕ್‌ನವರು ಅಧಿಕೃತ ಗುರುತಿನ ಚೀಟಿ ಅಥವಾ ನಿಯೋಜನೆಯ ಆದೇಶ ಪ್ರತಿ ಪರಿಶೀಲಿಸಿದ ನಂತರ ಇಂಧನ ಪೂರೈಸುವಂತೆ ತಿಳಿಸಿದ್ದಾರೆ

Advertisement

Udayavani is now on Telegram. Click here to join our channel and stay updated with the latest news.

Next