Advertisement

ದೇವೇಗೌಡರಿಂದ ಜೆಡಿಎಸ್‌ ಶಾಸಕರ ಮನವೊಲಿಕೆ

12:08 AM Jul 08, 2019 | Lakshmi GovindaRaj |

ಬೆಂಗಳೂರು: ಜೆಡಿಎಸ್‌ನ ಮೂವರು ಶಾಸಕರು ರಾಜೀನಾಮೆ ನೀಡಿ, ಅತೃಪ್ತ ಕಾಂಗ್ರೆಸ್‌ ಶಾಸಕರ ಜತೆಗೂಡಿ ಮುಂಬೈಗೆ ಹೋಗಿರುವುದರಿಂದ ಎಚ್ಚೆತ್ತುಕೊಂಡಿರುವ ಜೆಡಿಎಸ್‌, ಬೇರೆ ಇನ್ಯಾರೂ ಶಾಸಕರು ಹೋಗದಂತೆ ತಡೆಯುವ ಕಾರ್ಯದಲ್ಲಿ ನಿರತವಾಗಿದೆ.

Advertisement

ಕೆ.ಶ್ರೀನಿವಾಸಗೌಡ, ಸಿರಾ ಸತ್ಯನಾರಾಯಣ, ನಿಸರ್ಗ ನಾರಾಯಣಸ್ವಾಮಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡ್ತಾರೆ ಎಂಬ ಗುಸು ಗುಸು ಇರುವುದರಿಂದ ಆ ಎಲ್ಲ ಶಾಸಕರ ಮೇಲೆ ನಿಗಾ ವಹಿಸುವುದರ ಜತೆಗೆ ಖುದ್ದು ದೇವೇಗೌಡರೇ ಇವರ ಜತೆ ಮಾತನಾಡಿದ್ದಾರೆಂದು ಹೇಳಲಾಗಿದೆ.

ಮೂವರು ಶಾಸಕರು ರಾಜೀನಾಮೆ ನೀಡಿರುವುದು ಪಕ್ಷಕ್ಕೆ ಆಘಾತ ತಂದಿದೆ. ಇಂತಹ ಸಂದರ್ಭದಲ್ಲಿ ಪಕ್ಷಕ್ಕೆ ನಿಷ್ಠೆ ತೋರದೆ ಆಮಿಷಕ್ಕೆ ಬಲಿಯಾದರೆ ಹೇಗೆ? ಎಂದು ಶಾಸಕರನ್ನು ಪ್ರಶ್ನಿಸಿರುವ ದೇವೇಗೌಡರು, “ಕಷ್ಟ ಕಾಲದಲ್ಲಿ ನನ್ನ ಜತೆಗಿರಿ. ನಿಮಗೆ ಅಧಿಕಾರ ಕೊಡಿಸುವ ಹೊಣೆಗಾರಿಕೆ ನನ್ನದು. ಸರ್ಕಾರ ಮೊದಲು ಉಳಿಯಲಿ, ಆನಂತರ ಮಾತನಾಡೋಣ.

ಯಾವುದೇ ರೀತಿಯ ಆತುರದ ತೀರ್ಮಾನ ಕೈಗೊಳ್ಳಬೇಡಿ’ ಎಂದು ಮನವಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಮಧ್ಯೆ, ಲೋಕೋಪಯೋಗಿ ಸಚಿವ ಎಚ್‌.ಡಿ.ರೇವಣ್ಣ ಅವರು ಹಾಸನ ಹಾಗೂ ಮಂಡ್ಯ ಶಾಸಕರ ಮೇಲೆ ನಿಗಾ ವಹಿಸಿ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next