Advertisement

ಪೈವಳಿಕೆ ಚೇವಾರು: ಅಂಗಡಿಗೆ ನುಗ್ಗಿ ವ್ಯಾಪಾರಿಯ ಬರ್ಬರ ಕೊಲೆ

06:18 PM May 04, 2017 | Karthik A |

ಪೈವಳಿಕೆ ಚೇವಾರಿನಲ್ಲಿ ಓಮ್ನಿ ವ್ಯಾನಿನಲ್ಲಿ ಆಗಮಿಸಿದ ನಾಲ್ಕು ಮಂದಿಯ ತಂಡ ವ್ಯಾಪಾರಿಯೊಬ್ಬರನ್ನು ಅಂಗಡಿಗೆ ನುಗ್ಗಿ ಇರಿದು ಕೊಲೆಗೈದಿದೆ. ಚೇವಾರ್ ಮಂಡಕಾಪು ನಿವಾಸಿ ರಾಮಕೃಷ್ಣ (55) ಕೊಲೆಗೀಡಾದ ವ್ಯಾಪಾರಿ. ಗುರುವಾರ ಮದ್ಯಾಹ್ನ 2 ಗಂಟೆಗೆ ಈ ಘಟನೆ ನಡೆದಿದೆ. ಓಮ್ನಿ ವ್ಯಾನಿನಲ್ಲಿ ಆಗಮಿಸಿದ ಒಬ್ಬ ಯುವಕ ರಾಮಕೃಷ್ಣರ ಅಂಗಡಿ ಬಂದಿ ಸಿಗರೇಟು ಕೇಳಿ ಪಡೆದುಕೊಂಡು ಹೊರ ಬಂದಿದ್ದಾನೆ. ಬಳಿಕ ಓಮ್ನಿಯಲ್ಲಿದ್ದ ಮೂರು ಮಂದಿ ನೇರವಾಗಿ ಅಂಗಡಿಗೆ ನುಗ್ಗಿ ವ್ಯಾಪಾರಿಯನ್ನು ಇರಿದಿದ್ದಾರೆ. ಬೊಬ್ಬೆ ಕೇಳಿ ಊರವರು ಆಗಮಿಸುವಷ್ಟರಲ್ಲಿ ಆರೋಪಿಗಳು ಓಮ್ನಿಯಲ್ಲಿ ಪರಾರಿಯಾಗಿದ್ದಾರೆ. ಶರೀರದಲ್ಲಿ ಹಲವು ಭಾಗಗಳಿಗೆ ಇರಿತಕ್ಕೊಳಗಾದ ರಾಮಕೃಷ್ಣರನ್ನು ಮಂಗಳೂರು ಆಸ್ಪತ್ರೆಗೆ ಕೊಂಡುಹೋಗುವ ದಾರಿ ಮಧ್ಯೆ ಸಾವನ್ನಪ್ಪಿದ್ದಾರೆ.

Advertisement

ಪೆರ್ಮುದೆ ರಾಮಕೃಷ್ಣ ಕೊಲೆ ಖಂಡನೀಯ ಉನ್ನತ ತನಿಖೆಗೆ ನ್ಯಾ ಶ್ರೀಕಾಂತ್ ಆಗ್ರಹ
ಮಂಗಲ್ಪಾಡಿ ಶವಾಗಾರ ದಲ್ಲಿ ಮೃತದೇಹ ನೋಡಿದ ಬಳಿಕ ಮಾಧ್ಯಮಗಳಿಗೆ ವಿವರ ನೀಡಿದ ಶ್ರೀಕಾಂತ್. ಬಿಜೆಪಿ ನೇತಾರರಾದ , ಸುರೇಶ ಕುಮಾರ್ ಶೆಟ್ಟಿ, ಆದರ್ಶ್ ಬಿಎಂ, ವೆಲಾಯುಧನ್, ಹರೀಶ್ ಎಪಿ, ವಿಜಯ್ ರೈ, ವಲ್ಸರಾಜ್, ಪ್ರಸಾದ್ ರೈ, ಪದ್ಮನಾಭ ಕಡಪ್ಪುರ,ಧನರಾಜ್ ಈ ಸಂದರ್ಭ ಉಪಸ್ಥಿತರಿದ್ದು ,2 ದಿನಗಳಲ್ಲಿ ಆರೋಪಿಗಳ ಬಂಧನವಾಗದಿದ್ದಲ್ಲಿ ಪ್ರತಿಭಟನೆಗೆ ಬಿಜೆಪಿ ಸಿದ್ಧತೆ ನಡೆಸಿದೆ.ಮುಸ್ಲಿಂ ಲೀಗ್, ldf, ಆಡಳಿತದಲ್ಲಿ 1 ವರ್ಷದಲ್ಲಿ 10 ಕ್ಕೂ ಅಧಿಕ ಕೊಲೆ ಮಂಜೇಶ್ವರ ಮಂಡಲದಲ್ಲಿ ನಡೆದಿದ್ದು ಮರಳು ,ಗಾಂಜಾ ಮಾಫಿಯಾಕ್ಕೆ ಆಡಳಿತ ಪಕ್ಷಗಳ ಬೆಂಬಲವೇ ಇದಕ್ಕೆ ಕಾರಣ ಎಂದು ಬಿಜೆಪಿ ಅಭಿಪ್ರಾಯ ವ್ಯಕ್ತಪಡಿಸಿದೆ.



Advertisement

Udayavani is now on Telegram. Click here to join our channel and stay updated with the latest news.

Next