Advertisement

ವೈಭವದ ಗ್ರಾಮೀಣ ದಸರೆಗೆ ಸಾಂಸ್ಕೃತಿಕ ಮೆರಗು

05:50 PM Sep 28, 2019 | |

ಪಿರಿಯಾಪಟ್ಟಣ: ಜಿಲ್ಲೆಯಲ್ಲೇ ಪ್ರಥಮವಾಗಿ ಚಾಲನೆ ಪಡೆದ ಪಿರಿಯಾಪಟ್ಟಣ ತಾಲೂಕು ಗ್ರಾಮೀಣ ದಸರಾ ಅದ್ಧೂರಿಯಾಗಿ ಜರುಗಿತು. ಪಟ್ಟಣದ ಕನ್ನಂಬಾಡಿ ಅಮ್ಮ ದೇವಾಲಯದ ಬಳಿ ಸಂಸದ ಪ್ರತಾಪ್‌ ಸಿಂಹ ಹಾಗೂ ಶಾಸಕ ಕೆ.ಮಹದೇವ್‌ ಅವರು ಬೆಳ್ಳಿ ರಥದಲ್ಲಿ ಅಲಂಕೃತ ಚಾಮುಂಡೇಶ್ವರಿ ವಿಗ್ರಹಕ್ಕೆ ಪುಷ್ಪಾರ್ಚನೆ ಸಲ್ಲಿಸುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಕನ್ನಂಬಾಡಿಯಮ್ಮ ದೇವಾಲಯ ಬಳಿಯಿಂದ ಬಿ.ಎಂ ರಸ್ತೆಯ ಮೂಲಕ ಗೋಣಿಕೊಪ್ಪ ರಸ್ತೆಯ ಜೂನಿಯರ್‌ ಕಾಲೇಜು ಮೈದಾನದವರೆಗೆ ಮೆರವಣಿಗೆ ಸಾಗಿತು.

Advertisement

ಮೆರವಣಿಗೆಯಲ್ಲಿ ಮಂಗಳವಾದ್ಯ, ಕೇರಳದ ಚಂಡೆ ಮದ್ದಳೆ, ನಗಾರಿ, ಕಂಸಾಳೆ ನೃತ್ಯ, ವೀರಗಾಸೆ, ಟಿಬೆಟನ್‌ ಸಾಂಪ್ರದಾಯಿಕ ನೃತ್ಯ, ಕೀಲುಕುದುರೆ, ಗೊರವನ ಕುಣಿತ, ಪೂಜಾಕುಣಿತ, ಹುಲಿವೇಷ, ಕೀಲು ಗೊಂಬೆ ಕುಣಿತ, ನಂದಿ ಧ್ವಜಕುಣಿತ ಪ್ರದರ್ಶನದೊಂದಿಗೆ ಮಹಿಳೆಯರಿಂದ ಪೂರ್ಣಕುಂಭ ಸೇರಿದಂತೆ ವಿವಿಧ ಕಲಾ ತಂಡಗಳು ಸಾಗಿದವು.

ಕೆಲವು ಕಲಾ ತಂಡಗಳು ವೇದಿಕೆಯಲ್ಲಿ ಸಹ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟವು. ಸರ್ಕಾರಿ ನೌಕರರು ಶಾಸಕ ಕೆ.ಮಹದೇವ್‌ ಸೂಚನೆಯಂತೆ ಶ್ವೇತ ವಸ್ತ್ರಧಾರಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. ತಾಲೂಕಿನ ವಿವಿಧ ಗಿರಿಜನ ಶಾಲೆಯ ಮಕ್ಕಳು ಪ್ರದರ್ಶಿಸಿದ ಅರಣ್ಯ ಜನರ ನೃತ್ಯ ಕಾರ್ಯಕ್ರಮ ಆಕರ್ಷಣಿಯವಾಗಿತ್ತು. ಕಾರ್ಯಕ್ರಮದಲ್ಲಿ ತಾಪಂ ಅಧ್ಯಕ್ಷೆ ಕೆ.ಆರ್‌.ನಿರೂಪಾ, ತಹಶೀಲ್ದಾರ್‌ ಶ್ವೇತಾ ಎನ್‌. ರವೀಂದ್ರ, ಜಿಪಂ ಸದಸ್ಯರಾದ ಕೆ.ಎಸ್‌.ಮಂಜುನಾಥ್‌, ರುದ್ರಮ್ಮ ನಾಗಯ್ಯ, ಮೈಮುಲ್‌ ನಿರ್ದೇಶಕ ಪಿ.ಎಂ. ಪ್ರಸನ್ನ, ಎಪಿಎಂಸಿ ಅಧ್ಯಕ್ಷ ರಾಜಯ್ಯ, ತಾಪಂ ಇಒ ಡಿ.ಸಿ.ಶ್ರುತಿ, ಸದಸ್ಯರಾದ ರಂಗಸ್ವಾಮಿ, ಟಿ.ಎನ್‌. ಪಂಕಜಾ, ಆರ್‌.ಎಸ್‌.ಮಹದೇವ್‌, ಮೋಹನ್ರಾಜ್, ಮಲ್ಲಿಕಾರ್ಜುನ್‌, ಶೋಭಾ, ಜಯಂತಿ, ಸುಮಿತ್ರಾ, ಪುರಸಭೆ ಸದಸ್ಯರು ಮುಖ್ಯಾಧಿಕಾರಿ ಚಂದ್ರಕುಮಾರ್‌
ಹಲವರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next