Advertisement

Perampalli: ಡಿವೈಡರ್‌ ಮೇಲೇರಿದ ಕಾರು!

01:13 AM Jun 06, 2023 | Team Udayavani |

ಉಡುಪಿ: ಪೆರಂಪಳ್ಳಿಯಲ್ಲಿರುವ ಭಾರತೀಯ ಆಹಾರ ನಿಗಮ ಗೋದಾಮಿನ ಆವರಣ ಭಾಗದಲ್ಲಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ಡಿವೈಡರ್‌ ಮೇಲೇರಿದ ಘಟನೆ ಸೋಮವಾರ ನಡೆದಿದೆ.

Advertisement

ಕಾರು ಮಣಿಪಾಲದಿಂದ ಅಂಬಾಗಿಲಿನತ್ತ ತೆರಳುತ್ತಿತ್ತು. ಈ ಭಾಗದಲ್ಲಿ ಅಪಾಯಕಾರಿ ತಿರುವು ಇದ್ದು, ಇತ್ತೀಚೆಗಷ್ಟೇ ರಾತ್ರಿ ವೇಳೆ ಅಪರಿಚಿತರು ಆವರಣ ಗೋಡೆಯನ್ನು ನೆಲಸಮ ಮಾಡಿದ್ದರು. ವಾಹನ ಸವಾರರಿಗೆ ಅನುಕೂಲವಾಗುವಂತೆ ತಿರುವು ಹಾಗೂ ಸಿಗ್ನಲ್‌ಗ‌ಳ ಅಳವಡಿಕೆ ಮಾಡಿದರಷ್ಟೇ ಈ ಭಾಗದಲ್ಲಿ ಸುಗಮ ಸಂಚಾರ ಸಾಧ್ಯವಾಗಲಿದೆ.

ಇಲ್ಲದಿದ್ದರೆ ಮಳೆಗಾಲದ ಸಂದರ್ಭ ಮತ್ತಷ್ಟು ಅನಾಹುತ ಎದುರಾಗುವ ಸಾಧ್ಯತೆಗಳಿವೆ.

 

Advertisement

Udayavani is now on Telegram. Click here to join our channel and stay updated with the latest news.

Next