Advertisement

ಕೊನೆ ಹಂತದ ಸಿದ್ಧತೆಯಲ್ಲಿ ಪೆಪ್ಪೆರೆರೆ ಪೆರೆರೆರೆ

12:54 AM Apr 25, 2019 | Team Udayavani |

ಖ್ಯಾತ ನಟ ಶೋಭರಾಜ್‌ ಪಾವೂರು ಆ್ಯಕ್ಷನ್‌ ಕಟ್‌ ಹೇಳಿದ “ಪೆಪ್ಪೆರೆರೆ ಪೆರೆರೆರೆ’ತುಳು ಸಿನೆಮಾ ಶೂಟಿಂಗ್‌ ತಂಡ ಚಿತ್ರೀಕರಣ ಮುಗಿಸಿ ಕೊನೆಯ ಹಂತದ ಸಿದ್ಧತೆಯಲ್ಲಿ ತೊಡಗಿಕೊಂಡಿದೆ. ತುಳು ರಂಗಭೂಮಿ, ಸಿನೆಮಾ, ಕನ್ನಡ ಸಿನೆಮಾ, ಕಿರುತೆರೆಯಲ್ಲಿ ಸಾಕಷ್ಟು ಕೆಲಸ ಮಾಡಿದ ಶೋಭರಾಜ್‌ ಪೆಪ್ಪೆರೆರೆ ಪೆರೆರೆರೆ ಸಿನೆಮಾವನ್ನು ಕೈಗೆತ್ತಿಕೊಂಡು ರೆಡಿ ಮಾಡುತ್ತಿದ್ದಾರೆ. ಅವರೇ ಹೇಳುವ ಪ್ರಕಾರ “ಇದೊಂದು ಬಹುನಿರೀಕ್ಷೆಯ ಸಿನೆಮಾ.

Advertisement

ಹೀಗಾಗಿ ಯಾವುದೇ ಅವಸರ ಮಾಡದೆ, ಎಲ್ಲವೂ ಸಿದ್ಧವಾದ ಬಳಿಕ ಸಿನೆಮಾ ಬಗ್ಗೆ ಮಾತನಾಡಲಿದ್ದೇನೆ. ಇದಕ್ಕಾಗಿಯೇ ಸುದ್ದಿ ಮಾಡದೆ ಶೂಟಿಂಗ್‌ ಆರಂಭಿಸಿ ಮುಗಿಸಿದ್ದೇವೆ. ಕೆಲವೇ ಸಮಯದಲ್ಲಿ ಸಿನೆಮಾ ಪೂರ್ಣ ಸಿದ್ಧಗೊಳಿಸಿದ ಬಗ್ಗೆ ಸಿನೆಮಾದ ಬಗ್ಗೆ ಪ್ರಮೋಷನ್‌ ಆರಂಭಿಸಲಾಗುವುದು ಎನ್ನುತ್ತಾರೆ.

ಕರಾವಳಿಯ ಸೂಪರ್‌ ಸ್ಟಾರ್‌ಗಳಾದ ನವೀನ್‌ ಡಿ. ಪಡೀಲ್‌, ಅರವಿಂದ ಬೋಳಾರ್‌, ಭೋಜರಾಜ್‌ ವಾಮಂಜೂರು, ಸತೀಶ್‌ ಬಂದಳೆ, ಸಾಯಿಕೃಷ್ಣ, ಜೆ.ಪಿ. ತೂಮಿನಾಡ್‌ ಸೇರಿದಂತೆ ಹಲವು ಕಲಾವಿದರು ಸಿನೆಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಚೈತ್ರ ಶೆಟ್ಟಿ ಮುಖ್ಯಭೂಮಿಕೆಯಲ್ಲಿದ್ದಾರೆ. ಶೋಭರಾಜ್‌ ಆ್ಯಕ್ಷನ್‌ ಕಟ್‌ ಹೇಳುವ ಜತೆಗೆ ಸಿನೆಮಾದಲ್ಲಿ ಬಣ್ಣ ಹಚ್ಚಿದ್ದಾರೆ. ಗುರು ಬಾಯಾರ್‌ ಸಿನೆಮಾಕ್ಕೆ ಸಂಗೀತ ಒದಗಿಸಿದ್ದಾರೆ. ಸದ್ಯ ಎಕ್ಕೂರು ಭಾಗದಲ್ಲಿ ಸಿನೆಮಾದ ಶೂಟಿಂಗ್‌ ನಡೆಯುತ್ತಿದೆ. ಸಿನೆಮಾದ ಪೂರ್ಣ ಶೂಟಿಂಗ್‌ ಮುಗಿದ ಬಳಿಕವಷ್ಟೇ ಸಿನೆಮಾದ ಕುರಿತಂತೆ ಚಿತ್ರತಂಡ ಮಾತನಾಡಲು ನಿರ್ಧರಿಸಿದೆ. ಹೀಗಾಗಿ ಸಿನೆಮಾದ ಕಥೆ ಏನು? ಟೈಟಲ್‌ಗ‌ೂ ಸಿನೆಮಾದ ಕಥೆಗೂ ಸಂಬಂಧ ಹೇಗೆ? ಪಡೀಲ್‌, ಬೋಳಾರ್‌ ಕಾಂಬಿನೇಷನ್‌ ಹೇಗಿದೆ? ಈ ಎಲ್ಲ ವಿಚಾರಗಳಿಗೆ ಉತ್ತರ ಸದ್ಯಕ್ಕೆ ದೊರಕಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next