Advertisement

ಪೀಪಲ್ಸ್ ಎಕಾನಮಿಯಂತೆ! ಎಲ್ಲಿತ್ತಪ್ಪಾ ಅದು?: ಸದನದಲ್ಲಿ ಸಿದ್ದರಾಮಯ್ಯ ಸವಾಲು

05:10 PM Mar 16, 2022 | Team Udayavani |

ಬೆಂಗಳೂರು : ಪೀಪಲ್ಸ್ ಎಕಾನಮಿಯಂತೆ ! ಎಲ್ಲಿತಪ್ಪಾ ಅದು ?  ಹಾಗಾದರೆ ಬದ್ಧತಾ ವೆಚ್ಚ ತೆಗೆದು ಹಾಕಿ ಬಿಡಿ ನೋಡೋಣ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ರಾಜ್ಯ ಸರಕಾರಕ್ಕೆ ಬುಧವಾರ ಸವಾಲು ಹಾಕಿದ್ದಾರೆ.

Advertisement

ಮಧ್ಯಾಹ್ನ ಕಲಾಪ ಆರಂಭವಾದಾಗ ಕಾಂಗ್ರೆಸ್ ಸದಸ್ಯರು ತಡವಾಗಿ ಹಾಜರಾದರು. ಇದಕ್ಕೆ ಆಕ್ಷೇಪಿಸಿದ ಬಸನಗೌಡ ಪಾಟೀಲ್ ಯತ್ನಾಳ್ , ಈ ಬಜೆಟ್ ನೋಡಿ ಕಾಂಗ್ರೆಸ್ ನವರು ಕಲಾಪ ಬಾಯ್ಕಾಟ್ ಮಾಡಿದ್ದಾರೆ ಎಂದರೆ, ವಿರೋಧ ಪಕ್ಷ ಸತ್ತಿದೆ.‌ಕಾಂಗ್ರೆಸ್ ಗೆ ಶನಿ ಕಾಟ ಆರಂಭವಾಗಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ವ್ಯಂಗ್ಯವಾಡಿದರು.

ಆಗ ಸದನಕ್ಕೆ ಆಗಮಿಸಿದ ವಿಪಕ್ಷ ನಾಯಕ‌ ಸಿದ್ದರಾಮಯ್ಯ, ಪ್ಯಾನಿಕ್ ಆಗಿಬಿಟ್ಟಿದ್ದೇವೆ ಎಂತ ನೀವೆಲ್ಲ ಹೇಳುತ್ತಿದ್ದೀರಿ, ಏನೂ ಇಲ್ಲ. ಐ ಹ್ಯಾವ್ ಎಕ್ಸಪೋಸ್ಡ್  ದಿಸ್ ಬಜೆಟ್. ಅದೇನೋ ಪೀಪಲ್ಸ್  ಎಕಾನಮಿ ಅಂತಾ ಹೊಸದು ಹೇಳಿದ್ದಾರೆ. ಎಲ್ಲಿದೆಯಪ್ಪಾ ಅದು ಎಂದು ವ್ಯಂಗ್ಯವಾಡಿದರು.

ಇದನ್ನೂ ಓದಿ : ನಾವು ಸಾಲ ಮಾಡಿ ತುಪ್ಪ ತಿನ್ನುವವರಲ್ಲ: ಸಿದ್ದರಾಮಯ್ಯಗೆ ಸಿಎಂ ತಿರುಗೇಟು

ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಬೆಳಗಿನ ಕಲಾಪ ಸಂದರ್ಭದಲ್ಲಿ ಪೀಪಲ್ಸ್ ಬಜೆಟ್ ಬಗ್ಗೆ ಮಾತನಾಡಿದ್ದಕ್ಕೆ ಸಿದ್ದರಾಮಯ್ಯ ಈ ತಿರುಗೇಟು ನೀಡಿದರು.

Advertisement

ಸರಕಾರಿ ನೌಕರರ ವೇತನ ಪರಿಷ್ಕರಣೆಗೆ ಆಯೋಗ

ರಾಜ್ಯ ಸರಕಾರಿ ನೌಕರರ ಬಹುಕಾಲದ ಬೇಡಿಕೆ ಈಡೇರಿಕೆಗೆ ಕೊನೆಗೂ ಸರಕಾರ ಮುಂದಾಗಿದೆ. ಸರಕಾರಿ ನೌಕರರ ವೇತನ ಪರಿಷ್ಕರಣೆಗೆ ಪ್ರತ್ಯೇಕ ಆಯೋಗ ರಚನೆ ಮಾಡಲಾಗುವುದು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ.

ಸರಕಾರಿ ನೌಕರರ ವೇತನ ಪರಿಷ್ಕರಣೆಗೆ ಸಂಬಂಧಪಟ್ಟಂತೆ ಹಲವು ಸಭೆಗಳು ನಡೆದಿವೆ.‌ಈ ವಿಚಾರದಲ್ಲಿ ಸರಕಾರ ಮುಕ್ತವಾಗಿದೆ. ಕೇಂದ್ರ ಸರಕಾರದ ಮಾದರಿಯಲ್ಲಿ ಆದಷ್ಟು ಬೇಗ ವೇತನ ಪರಿಷ್ಕರಣೆಗೆ ಆಯೋಗ ರಚನೆ ಮಾಡಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next