Advertisement

ಕಾಂಗ್ರೆಸ್‌ ಕಿತ್ತೊಗೆಯಲು ಜನರ ನಿರ್ಧಾರ

02:22 PM Apr 15, 2022 | Team Udayavani |

ಮಹದೇವಪುರ: ದೇಶದಲ್ಲಿ ಕಾಂಗ್ರೆಸ್‌ ಪಕ್ಷವನ್ನು ಕಿತ್ತು ಹೊಗೆಯಬೇಕೆಂದು ಜನರು ತೀರ್ಮಾನಿಸಿದ್ದಾರೆ. ಜನರಿಗೆ ಬಿಜೆಪಿ ಆಡಳಿತದಲ್ಲಿ ತೃಪ್ತಿಯಿದೆ ಎಂದು ಶಾಸಕ ಅರವಿಂದ ಲಿಂಬಾವಳಿ ತಿಳಿಸಿದರು.

Advertisement

ಕ್ಷೇತ್ರದ ಸಾದರಮಂಗಲದಲ್ಲಿ ಬಿಜೆಪಿ ಆಯೋಜಿಸಿದ್ದ ಅಂಬೇಡ್ಕರ್‌ ಜಯಂತಿಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಆಡಳಿತದಲ್ಲಿ ಬಡವರು, ಮಹಿಳೆಯರಿಗೆ ಉತ್ತಮ ಸೌಲಭ್ಯ, ಕಲ್ಯಾಣ ಯೋಜನೆಗಳು ದೊರೆತಿವೆ ಎಂದರು.

ಶೈಕ್ಷಣಿಕ, ಸಾಮಾಜಿಕ, ಆರ್ಥಿಕವಾಗಿ ಕ್ಷೇತ್ರದಲ್ಲಿ ದಲಿತರು ಹೆಚ್ಚಿನ ಸಾಧನೆಯ ಮಾಡುವ ಮೂಲಕ ಪ್ರಗತಿಪರರಾಗ ಬೇಕಿದೆ. ಕಟ್ಟಕಡೆ ವ್ಯಕ್ತಿಗೂ ಸೇವೆ, ಸೌಲಭ್ಯ, ಯೋಜನೆಗಳು ಸಲ್ಲಬೇಕು ಎಂಬುದೇ ಬಿಜೆಪಿ ಸಿದ್ಧಾಂತ ಎಂದರು.

ಅಂಬೇಡ್ಕರ್‌ ಒಂದು ಸಮುದಾಯಕ್ಕೆ ಸೀಮಿತರಲ್ಲ, ಅವರು ದೇಶಕ್ಕೆ ಸಂವಿಧಾನ ವನ್ನು ನೀಡಿದ ಸಮಿತಿ ಅಧ್ಯಕ್ಷರಾಗಿ, ಸಮಾಜಶಾಸ್ತ್ರಜ್ಞರಾಗಿ, ಅರ್ಥಶಾಸ್ತ್ರಜ್ಞ ರಾಗಿ, ಇತಿಹಾಸಕಾರರಾಗಿ ಹೀಗೆ ಅವರಿಗೆ ತಿಳಿಯದ ಕ್ಷೇತ್ರವಿರಲಿಲ್ಲ. ಹಿಂದುಳಿದವರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆ ತರುವ ಜೊತೆಗೆ ಎಲ್ಲರ ಕರೆದೊ ಯ್ಯುವ ಉದ್ದೇಶ ಅವರದಾಗಿತ್ತು ಎಂದರು.

ಕಾರ್ಯಕ್ರಮದಲ್ಲಿ ಕ್ಷೇತ್ರ ಗ್ರಾಮಾಂತರ ಅಧ್ಯಕ್ಷ ನಟರಾಜ್‌, ಮುಖಂಡರಾದ ಹೂಡಿ ಪಿಳ್ಳಪ್ಪ, ಮಾರಪ್ಪ, ಚೆನ್ನಸಂದ್ರ ಚಂದ್ರಶೇಖರ್‌, ಬೈರತಿ ರಮೇಶ್‌, ವೀರ ಸ್ವಾಮಿ ರೆಡ್ಡಿ, ಪ್ರಶಾಂತ್‌ ರೆಡ್ಡಿ, ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next