Advertisement

ಪಿಂಚಣಿ ಯೋಜನೆ: ವೇತನ ಮಿತಿ ರದ್ದು ಮಾಡಿದ ಸುಪ್ರೀಂ ಕೋರ್ಟ್‌

10:31 PM Nov 04, 2022 | Team Udayavani |

ನವದೆಹಲಿ: 2014ರ ಉದ್ಯೋಗಿಗಳ ಪಿಂಚಣಿ(ತಿದ್ದುಪಡಿ) ಯೋಜನೆಯ ಮಾನ್ಯತೆಯನ್ನು ಎತ್ತಿಹಿಡಿದಿರುವ ಸುಪ್ರೀಂ ಕೋರ್ಟ್‌, ಪಿಂಚಣಿ ಯೋಜನೆಗೆ ಸೇರ್ಪಡೆಯಾಗಲು ಇದ್ದ 15 ಸಾವಿರ ರೂ. ಮಾಸಿಕ ವೇತನದ ಮಿತಿಯನ್ನು ರದ್ದು ಮಾಡಿದೆ.

Advertisement

ಯೋಜನೆಗೆ ಸೇರಬೇಕೆಂದರೆ ಗರಿಷ್ಠ ವೇತನ(ಮೂಲ ವೇತನ ಮತ್ತು ತುಟ್ಟಿ ಭತ್ಯೆ) 15 ಸಾವಿರ ರೂ. ಇರಬೇಕು ಎಂದು 2014ರ ತಿದ್ದುಪಡಿಯಲ್ಲಿ ತಿಳಿಸಲಾಗಿತ್ತು. ಈ ತಿದ್ದುಪಡಿಗೂ ಮುನ್ನ ಪಿಂಚಣಿಗೆ ಅರ್ಹ ವೇತನ ಗರಿಷ್ಠ 6,500 ರೂ.(ಮಾಸಿಕ) ಆಗಿತ್ತು.

ಶುಕ್ರವಾರ ತೀರ್ಪು ನೀಡಿದ ಸಿಜೆಐ ಯು.ಯು.ಲಲಿತ್‌ ನೇತೃತ್ವದ ನ್ಯಾಯಪೀಠ, ಯಾರ್ಯಾರು ಪಿಂಚಣಿ ಯೋಜನೆಗೆ ಸೇರ್ಪಡೆಯಾಗಿಲ್ಲವೋ, ಅಂಥ ಉದ್ಯೋಗಿಗಳು 6 ತಿಂಗಳ ಒಳಗಾಗಿ ಸೇರಬೇಕು. ನಿಗದಿತ ದಿನಾಂಕದೊಳಗೆ ಸೇರ್ಪಡೆಯಾಗದ ಅರ್ಹ ಉದ್ಯೋಗಿಗಳಿಗೆ ಮತ್ತೂಂದು ಅವಕಾಶವನ್ನು ನೀಡಬೇಕು ಎಂದು ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next