Advertisement

ಕೇಸು ಬಾಕಿ ಶೋಭೆಯಲ್ಲ

08:31 PM Feb 28, 2019 | Team Udayavani |

ಹೊಸದಿಲ್ಲಿ: ಹೆಚ್ಚಿನ ಪ್ರಮಾಣದಲ್ಲಿ ಕೇಸುಗಳು ವಿಚಾರಣೆಗೆ ಬಾಕಿ ಇರುವುದು ವ್ಯವಸ್ಥೆಗೆ ಶೋಭೆ ತರುವ ವಿಚಾರವಲ್ಲ ಎಂದು ನಿಯೋಜಿತ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯ್‌ ಹೇಳಿದ್ದಾರೆ. ಅವುಗಳ ಪ್ರಮಾಣ ತಗ್ಗಿಸುವ ನಿಟ್ಟಿನಲ್ಲಿ ಕ್ರಮಗಳನ್ನು ಕೈಗೊಳ್ಳಬೇಕು ಎಂದಿದ್ದಾರೆ. ‘ಯೂತ್‌ ಬಾರ್‌ ಅಸೋಸಿಯೇಷನ್‌ ಆಫ್ ಇಂಡಿಯಾ’ ಸಂಘಟನೆಯ ಕಾರ್ಯಕ್ರಮದಲ್ಲಿ ನ್ಯಾ| ಗೊಗೊಯ್‌ ಮಾತನಾಡಿದ್ದಾರೆ.

Advertisement

ಸಿವಿಲ್‌ ಪ್ರಕರಣಗಳಲ್ಲಿ ಎರಡು- ಮೂರು ದಶಕಗಳ ಬಳಿಕ ತೀರ್ಪು ಪ್ರಕಟವಾಗುತ್ತದೆ. ಆದರೆ ಕ್ರಿಮಿನಲ್‌ ಪ್ರಕರಣಗಳಲ್ಲಿ ಕೂಡಲೇ ವಿಚಾರಣೆ ನಡೆದು ತೀರ್ಪು ಪ್ರಕಟವಾಗುತ್ತದೆ ಎಂದು ಹೇಳಿದ್ದಾರೆ. ದೇಶಾದ್ಯಂತ ಜಿಲ್ಲಾ ಕೋರ್ಟ್‌ಗಳು ಸೇರಿದಂತೆ 5,950 ಹುದ್ದೆಗಳು ಭರ್ತಿಯಾಗಬೇಕಾಗಿವೆ ಎಂದೂ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next