Advertisement

ಶ್ರೀಕೃಷ್ಣನೇ ನೋಡಿಕೊಳ್ಳುತ್ತಾನೆ: ಹಂಸಲೇಖ ಟೀಕೆಗೆ ವಿಶ್ವಪ್ರಸನ್ನ ತೀರ್ಥರ ಪ್ರತಿಕ್ರಿಯೆ

12:41 PM Nov 15, 2021 | Team Udayavani |

ಉಡುಪಿ :’ಹಂಸಲೇಖ ಅವರ ಟೀಕೆಗಳಿಗೆ ನಾವು ಪ್ರತಿಭಟನೆ ಮಾಡಲು ಹೋಗುವುದಿಲ್ಲ, ಶ್ರೀಕೃಷ್ಣನೇ ಪ್ರತೀಕಾರ ಮಾಡುತ್ತಾನೆ’ ಎಂದು ಪೇಜಾವರ ಮಠದ ಯತಿಗಳಾದ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಗಳು ಸೋಮವಾರ ಹೇಳಿಕೆ ನೀಡಿದ್ದಾರೆ.

Advertisement

‘ದಲಿತರ ಕೇರಿಯಲ್ಲಿ ಪೇಜಾವರ ಶ್ರೀಗಳು ಕುರಿ, ಕೋಳಿ ಮಾಂಸ ಕೊಟ್ಟರೆ ತಿನ್ನುತ್ತಿದ್ದರೆ’ ಎಂಬ ಹಂಸಲೇಖ ಅವರ ಟೀಕೆಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶ್ರೀ ವಿಶ್ವ ಪ್ರಸನ್ನ ತೀರ್ಥರು,’ ಹಂಸಲೇಖ ಅವರಿಗೆ ಇಂತಹ ಹೇಳಿಕೆಯಿಂದ ಪ್ರಚಾರ ಬೇಕಿರಲಿಲ್ಲ.ಇಂತಹ ಮಾತುಗಳು ಅವರ ಬಾಯಿಯಿಂದ ಬರಬಾರದಿತ್ತು’ ಎಂದರು.

‘ಗುರುಗಳು(ವಿಶ್ವೇಶ ತೀರ್ಥ ಶ್ರೀಪಾದರು) ಎಂದೂ ಪ್ರಚಾರಕ್ಕಾಗಿ ಕೆಲಸ ಮಾಡಿದವರಲ್ಲ.ಕೇವಲ ವಿಗ್ರಹದಲ್ಲಿ ಮಾತ್ರವಲ್ಲ, ಎಲ್ಲರ ಹೃದಯದಲ್ಲಿ ಅವರು ಕೃಷ್ಣನನ್ನು ಕಂಡಿದ್ದರು.ಅವರು ಪ್ರಚಾರಕ್ಕಾಗಿ ದಲಿತರ ಮನೆಗಳಿಗೆ ಹೋಗಿರಲಿಲ್ಲ’ ಎಂದರು.

ಇದನ್ನೂ ಓದಿ : ಒಂದೇ ಕಾರ್ಯಕ್ರಮದಲ್ಲಿ ಹಲವರ ಆಕ್ರೋಶಕ್ಕೆ ಗುರಿಯಾದ ನಾದಬ್ರಹ್ಮ!

‘ಕೃಷ್ಣನಿಗೆ ಅಗ್ರಪೂಜೆ ಮಾಡುವ ವೇಳೆಯಲ್ಲಿ ಶಿಶುಪಾಲ ಟೀಕಿಸಿದ್ದ, ಅವನಿಗೆ ಕೃಷ್ಣನೇ ತಕ್ಕ ಶಾಸ್ತಿ ಮಾಡಿದ್ದ, ಅದೇ ರೀತಿಯಲ್ಲಿ ಶ್ರೀಕೃಷ್ಣನೇ ಪ್ರತೀಕಾರ ಮಾಡುತ್ತಾನೆ’ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next