Advertisement

ಪೆಗಾಗಸ್‌ ಬೇಹುಗಾರಿಕೆ ಪ್ರಕರಣ: ತನಿಖೆಗೆ ಸುಪ್ರೀಂನಿಂದಲೇ ಸಮಿತಿ

12:20 AM Sep 24, 2021 | Team Udayavani |

ಹೊಸದಿಲ್ಲಿ: ಮಹತ್ವದ ಬೆಳವಣಿಗೆಯೊಂದರಲ್ಲಿ, ಪೆಗಾಗಸ್‌ ಬೇಹುಗಾರಿಕೆ ಪ್ರಕರಣದ ತನಿಖೆಗೆ ತಾಂತ್ರಿಕ ತಜ್ಞರ ಸಮಿತಿ ರಚಿಸಲು ಸುಪ್ರೀಂ ಕೋರ್ಟ್‌ ಮುಂದಾಗಿದೆ.

Advertisement

ಗುರುವಾರ ನ್ಯಾಯಪೀಠವು ಈ ವಿಚಾರ ತಿಳಿಸಿದ್ದು, ಮುಂದಿನ ವಾರ ಈ ಕುರಿತ ಮಧ್ಯಾಂತರ ಆದೇಶ ಹೊರಡಿಸುವುದಾಗಿ ಹೇಳಿದೆ. ಪೆಗಾಸಸ್‌ ಪ್ರಕರಣದ ಬಗ್ಗೆ ಸ್ವತಂತ್ರ ತನಿಖೆಗೆ ಕೋರಿ ಹಲವು ಅರ್ಜಿಗಳು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿವೆ.

ಬೇಹುಗಾರಿಕೆ ಆರೋಪದ ತನಿಖೆಗೆ ನಾವೇ ಖುದ್ದು ತಜ್ಞರ ಸಮಿತಿ ರಚಿಸುವುದಾಗಿ ಕೇಂದ್ರ ಸರಕಾರ ಕೋರ್ಟ್‌ಗೆ ತಿಳಿಸಿತ್ತು. ಇದಕ್ಕೆ ಅರ್ಜಿದಾರರಿಂದ ಆಕ್ಷೇಪ ಕೇಳಿಬಂದಿತ್ತು. ಈಗ, ನ್ಯಾಯಾಲಯವೇ ಸ್ವತಃ ಸಮಿತಿಯೊಂದನ್ನು ರಚಿಸುವುದಾಗಿ ತಿಳಿಸಿದೆ. ತಜ್ಞರ ಹೆಸರನ್ನು ಅಂತಿಮಗೊಳಿಸಿ ಮುಂದಿನ ವಾರ ಮಧ್ಯಾಂತರ ಆದೇಶ ಹೊರಡಿಸುವುದಾಗಿ ಸಿಜೆಐ ಎನ್‌.ವಿ.ರಮಣ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next