Advertisement

ಪೆಗಾಸಸ್ ಬೇಹುಗಾರಿಕೆ ಪ್ರಕರಣ; ಸುಪ್ರೀಂನಲ್ಲಿ ಉಲ್ಟಾ ಹೊಡೆದ ಕೇಂದ್ರ ಸರಕಾರ

11:36 AM Sep 14, 2021 | Team Udayavani |

ಹೊಸದಿಲ್ಲಿ: ಪೆಗಾಸಸ್‌ ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿ ಉಲ್ಟಾ ಹೊಡೆದಿರುವ ಕೇಂದ್ರ ಸರಕಾರ, ವಿಸ್ತೃತ ಅಫಿಡವಿಟ್‌ ಸಲ್ಲಿಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಸೋಮವಾರ ಹೇಳಿದೆ.

Advertisement

ಇಸ್ರೇಲ್‌ನ ಬೇಹುಗಾರಿಕ ಸಂಸ್ಥೆಯನ್ನು ಬಳಸಿ ಕೊಂಡು ತಮ್ಮ ಮೇಲೆ ಕಣ್ಗಾವಲು ಮಾಡಲಾಗಿದ್ದು, ಈ ಕುರಿತು ತನಿಖೆಗೆ ಆಗ್ರಹಿಸಿ ಸಲ್ಲಿಕೆಯಾಗಿರುವ ಅರ್ಜಿ ಗಳ ವಿಚಾರಣೆ ವೇಳೆ ಸರಕಾರ ಈ ಹೇಳಿಕೆ ನೀಡಿದೆ. “ಅಫಿಡವಿಟ್‌ ಸಲ್ಲಿಕೆಯಿಂದ ರಾಷ್ಟ್ರೀಯ ಭದ್ರತೆ ಮೇಲೆ ಪರಿಣಾಮ ಬೀರಬಹುದು. ನಾವು ಯಾವ ಸಾಫ್ಟ್ ವೇರ್‌ ಬಳಸುತ್ತಿದ್ದೇವೆ ಎನ್ನುವುದು ಭಯೋತ್ಪಾದಕರಿಗೆ ತಿಳಿಯಬಾರದು. ಹಾಗಾಗಿ ಅಫಿಡವಿಟ್‌ ಸಲ್ಲಿಸುವುದಿಲ್ಲ’  ಎಂದು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಹೇಳಿದ್ದಾರೆ.

ಇದರಿಂದ ಕುಪಿತಗೊಂಡ ಸಿಜೆಐ ಎನ್‌.ವಿ.ರಮಣ ನೇತೃತ್ವದ ನ್ಯಾಯಪೀಠ, “ಕಳೆದ ವಿಚಾರಣೆ ವೇಳೆಯೇ ಅಫಿಡವಿಟ್‌ ಸಲ್ಲಿಸುವಂತೆ ಹೇಳಿದ್ದೆವು. ಅದಕ್ಕೆ ಕಾಲಾ ವಕಾಶವನ್ನೂ ನೀಡಿದ್ದೆವು. ಈಗ ನೀವು ಆಗಲ್ಲ ಎನ್ನುತ್ತಿದ್ದೀರಿ. ನಾವು ರಾಷ್ಟ್ರೀಯ ಭದ್ರತೆಗೆ ಸಂಬಂಧಿ ಸಿದ ಮಾಹಿತಿ ಕೇಳುತ್ತಿಲ್ಲ. ನಾಗರಿಕರು  ಫೋನ್‌ ಕದ್ದಾಲಿಕೆ ಮಾಡಲಾಗಿದೆ ಎಂದು ಆರೋ ಪಿಸಿ ನಮ್ಮ ಮುಂದೆ ಬಂದಿದ್ದಾರೆ. ಅದಕ್ಕೆ ನಮಗೆ ಉತ್ತರ ಬೇಕು. ಇನ್ನು 2-3 ದಿನಗಳಲ್ಲಿ ನಾವು ಮಧ್ಯಾಂತರ ಆದೇಶ ಹೊರಡಿಸಲಿದ್ದೇವೆ’ ಎಂದು ಹೇಳಿತು.

Advertisement

Udayavani is now on Telegram. Click here to join our channel and stay updated with the latest news.

Next