Advertisement

ಕಾರು ಢಿಕ್ಕಿಯಾಗಿ ಪಾದಚಾರಿ ಸಾವು

08:58 PM Apr 22, 2023 | Team Udayavani |

ಗಂಗೊಳ್ಳಿ: ಹೊಸಾಡು ಗ್ರಾಮದ ಹೆದ್ದಾರಿಯ ಪೆಟ್ರೋಲ್‌ ಬಂಕ್‌ ಬಳಿ ರಸ್ತೆ ದಾಟಲು ನಿಂತಿದ್ದ ತ್ರಾಸಿ ಗ್ರಾಮದ ಆನಗೋಡು ನಿವಾಸಿ ನಾಗೇಶ ಪೂಜಾರಿ (60) ಅವರಿಗೆ ಕಾರು ಢಿಕ್ಕಿಯಾಗಿ ಗಂಭೀರ ಗಾಯಗೊಂಡು, ಸಾವನ್ನಪ್ಪಿದ ಘಟನೆ ಎ. 21ರಂದು ರಾತ್ರಿ 11.15ರ ಸುಮಾರಿಗೆ ಸಂಭವಿಸಿದೆ.

Advertisement

ಗಂಭೀರ ಗಾಯಗೊಂಡ ನಾಗೇಶ ಪೂಜಾರಿಯವರನ್ನು ರತ್ನಾಕರ ಆಚಾರ್ಯ ಹಾಗೂ ಸುನಿಲ್‌ ಪೂಜಾರಿ ಎಂಬುವರು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಪರೀಕ್ಷಿಸಿದ ವೈದ್ಯರು ಅದಾಗಲೇ ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.

ಕಾರು ಚಾಲಕ ಸ್ಟಾನಿ ಡಿ’ಸಿಲ್ವ ವಿರುದ್ಧ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

———–
ಕಾರು-ಬೈಕ್‌ ಢಿಕ್ಕಿ : ಸವಾರಗೆ ಗಾಯ

ಕುಂದಾಪುರ: ಕೋಟೇಶ್ವರದ ಫ್ಲೈಓವರ್‌ ಬಳಿ ಕಾರಿಗೆ ಬೈಕ್‌ ಢಿಕ್ಕಿಯಾಗಿ, ಬೈಕ್‌ ಸವಾರ ಪ್ರತೀಕ್‌ ಗಾಯಗೊಂಡ ಘಟನೆ ಎ. 22ರ ಬೆಳಗ್ಗೆ 8.10ರ ಸುಮಾರಿಗೆ ಸಂಭವಿಸಿದೆ.
ಗಾಯಗೊಂಡ ಪ್ರತೀಕ್‌ನನ್ನು ಕೋಟೇಶ್ವರದ ಆಸ್ಪತ್ರೆಗೆ ದಾಖಲಿಸಲಾಗಿದೆ.

Advertisement

ಕಾರು ಚಾಲಕ ಶಾನ್‌ವಾಝ್ ನೀಡಿದ ದೂರಿನಂತೆ ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next