Advertisement

ತೆಕ್ಕಟ್ಟೆ: ಅಪಾಯದಲ್ಲಿದ್ದ ನವಿಲಿನ ರಕ್ಷಣೆ

06:25 PM May 08, 2024 | Team Udayavani |

ತೆಕ್ಕಟ್ಟೆ: ಇಲ್ಲಿನ ತೆಕ್ಕಟ್ಟೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ನಿವೃತ್ತ ಮುಖ್ಯೋಪಾಧ್ಯಾಯ ಶ್ರೀನಿವಾಸ ಅಡಿಗ ಅವರ ಮನೆಯ ಸಮೀಪದ ಕೆರೆಯೊಂದರಲ್ಲಿ ಬಲೆಗೆ ಸಿಲುಕಿ ಅಪಾಯದಲ್ಲಿದ್ದ ನವಿಲೊಂದನ್ನು ಜಿ.ಪಂ.ಶಿಕ್ಷಣ ಮತ್ತು ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಗಣಪತಿ ಟಿ.ಶ್ರೀಯಾನ್‌ ರಕ್ಷಿಸಿ ಮಾನವೀಯತೆ ಮೆರೆದ ಘಟನೆ ಮೇ.8 ರಂದು ಸಂಭವಿಸಿದೆ.

Advertisement

ಕಳೆದ ಒಂದು ದಿನಗಳಿಂದಲೂ ನವಿಲೊಂದು ಆಕ್ರಂದಿಸುತ್ತಿರುವುದನ್ನು ನೋಡಿದ ಇಲ್ಲಿನ ಸ್ಥಳೀಯ ನಿವಾಸಿ ಶಾರದಾ ಅಡಿಗ, ಕೆರೆ ಬಳಿ ತೆರಳಿದಾಗ ನವಿಲಿನ ಕಾಲಿಗೆ ಬಲೆ ಸಿಲುಕಿ ಅಪಾಯದಲ್ಲಿರುವುದು ಗಮನಕ್ಕೆ ಬಂದಿದೆ.

ತತ್‌ಕ್ಷಣವೇ ಜಿ.ಪಂ.ಶಿಕ್ಷಣ ಮತ್ತು ಸ್ಥಾಯಿ ಸಮಿತಿಯ ಮಾಜಿ ಅಧ್ಯಕ್ಷ ಗಣಪತಿ ಟಿ.ಶ್ರೀಯಾನ್‌ ಅವರಿಗೆ ಕರೆ ಮಾಡಿ ತಿಳಿಸಿದಾಗ, ಅವರು ಸ್ಥಳಕ್ಕೆ ಧಾವಿಸಿ ನವಿಲಿನ ಕಾಲಿಗೆ ಸಿಲುಕಿಕೊಂಡಿರುವ ಬಲೆಯನ್ನು ಕತ್ತರಿಯ ಸಹಾಯದಿಂದ ಬೇರ್ಪಡಿಸುವ ಮೂಲಕ ಅಪಾಯದಲ್ಲಿ ಸಿಲುಕಿದ್ದ ನವಿಲಿಗೆ ಜೀವದಾನ ಮಾಡಿದರು.

ಈ ಸಂದರ್ಭದಲ್ಲಿ ಗೀತಾ ಪುರಾಣಿಕ್‌ ಹಾಗೂ ಮೀನಾಕ್ಷಿ ಅವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next