Advertisement

ಪಿಡಿಒ ಸುರೇಶ ವರ್ಗಾವಣೆ ತಡೆಗೆ ಮನವಿ

03:51 PM Oct 22, 2019 | Team Udayavani |

ಶಹಾಪುರ: ವಡಿಗೇರಾ ತಾಲೂಕಿನ ಗುಂಡಗುರ್ತಿ ಗ್ರಾಪಂ ಅಭಿವೃದ್ಧಿ ಅಧಿಕಾರಿ ಸುರೇಶ ಮೇಲೆ ಕೆಲವು ಗ್ರಾಪಂ ಸದಸ್ಯರು ಅಕ್ರಮ ಬಿಲ್‌ ಬರೆದು ಕೊಂಡುವಂತೆ ಒತ್ತಡ ಹೇರುತ್ತಿದ್ದು, ಅವರ ಕರ್ತವ್ಯಕ್ಕೆ ಚ್ಯುತಿ ತರುತ್ತಿದ್ದಾರೆ ಎಂದು ಆರೋಪಿಸಿ ಹಲವು ಗ್ರಾಪಂ ಸದಸ್ಯರು ಸಿಇಒಗೆ ಮನವಿ ಪತ್ರ ಸಲ್ಲಿಸಿದರು.

Advertisement

ಪಿಡಿಒ ಸುರೇಶ ಪ್ರಾಮಾಣಿಕ ವಾಗಿ ಕಾರ್ಯ ನಿರ್ವಹಿಸುತ್ತಿದ್ದು, ವಿವಿಧ ಯೋಜನೆಗಳನ್ನು ಅರ್ಹರಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ. ಪ್ರಾಮಾಣಿಕತೆಯಿಂದ ಕೆಲಸ ಮಾಡುವವರು ನಮಗೆ ಬೇಕಿಲ್ಲ. ನಾವು ಹೇಳಿದಂತೆ ಬೋಗಸ್‌ ಬಿಲ್‌ ಬರೆದು ಕೊಡಬೇಕು. ಇಲ್ಲವಾದಲ್ಲಿ ನೀವು ಜಾಗ ಖಾಲಿ ಮಾಡಿ ಎಂದು ಕೆಲವರು ಅಭಿವೃದ್ಧಿ ಅಧಿಕಾರಿಗಳಿಗೆ ಹೆದರಿಸಿದ್ದಾರೆ ಎಂದು ಗ್ರಾಪಂ ಸದಸ್ಯ ಬಸವರಾಜ ಚಂದ್ರಾಯಗೌಡ ಆರೋಪಿಸಿದ್ದು, ಅಲ್ಲದೆ ಪಿಡಿಒ ಸುರೇಶ ಮೇಲೆ ಇಲ್ಲದ ಸಲ್ಲದ ಆರೋಪ ಮಾಡುವ ಮೂಲಕ ಆತನನ್ನು ಈ ಗ್ರಾಪಂ ಸ್ಥಾನದಿಂದ ಬೇರಡೆ ವರ್ಗಾವಣೆ ಮಾಡುವ ಹುನ್ನಾರ ನಡೆದಿದೆ. ಕೂಡಲೇ ನೀವು ಗ್ರಾಪಂ ಕಚೇರಿಗೆ ಆಗಮಿಸಿ ಪರಿಶೀಲನೆ ನಡೆಸಬೇಕು.

ಪ್ರಾಮಾಣಿಕ ಅಧಿಕಾರಿ ಸುರೇಶ ಅವರನ್ನು ಗುಂಡಗುರ್ತಿ ಗ್ರಾಪಂ ಅಭಿವೃದ್ಧಿಯಾಗಿಯೇ ಮುಂದು ವರೆಸಬೇಕು. ಇಲ್ಲವಾದಲ್ಲಿ ಮುಂಬರುವ ದಿನಗಳಲ್ಲಿ ಗ್ರಾಮಸ್ಥರೊಂದಿಗೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ಹೊನ್ನಪ್ಪ ಎಸ್‌. ಪೀರಾ, ಬಸಪ್ಪ ಹುಲಕಲ್‌ ಸೇರಿದಂತೆ ನಿವೃತ್ತ ಯೋಧ ಮಲ್ಲಣ್ಣ ಶಿರಡ್ಡಿ, ಮುಖಂಡರಾದ ಚಂದ್ರಶೇಖರ ಯಾಳಗಿ, ರಂಗನಾಥ ಮಸರಕಲ್‌, ಶಿವು ಹಂಚನಾಳ, ಶರಣಪ್ಪ ಕ್ವಾಟಿ, ಮಲ್ಲಪ್ಪ ದೊಡ್ಮನಿ, ಶೇಖರ ಹೊಸ್ಮನಿ, ಮಲ್ಲಪ್ಪ ಗೋಸಾಲ, ಮಲ್ಲಪ್ಪ ಲಿಂಗದಳ್ಳಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next