Advertisement

ಲಂಚ ಸ್ವೀಕಾರ ಸಂಗಾಪೂರ ಪಿಡಿಒ ಹಾಗೂ ಕಾರ್ಯದರ್ಶಿ ಎಸಿಬಿ ಬಲೆಗೆ

05:40 PM Jan 13, 2022 | Team Udayavani |

ಗಂಗಾವತಿ: ಮನೆಯ ಹಕ್ಕು ಬದಲಾವಣೆ ಹಾಗೂ 11 ಬಿ ಫಾರಂ ನೀಡಲು ಲಂಚದ ಬೇಡಿಕೆ ಇಟ್ಟಿದ್ದ ಸಂಗಾಪೂರ ಗ್ರಾ.ಪಂ. ಪಿಡಿಒ ಹಾಗೂ ಕಾರ್ಯದರ್ಶಿಗಳನ್ನು ಲಂಚದಹಣ ಸ್ವೀಕರಿಸುವ ಸಂದರ್ಭದಲ್ಲಿ ಎಸಿಬಿ ಪೊಲೀಸರು  ಬಂಧಿಸಿದ ಪ್ರಕರಣ ಗುರುವಾರ ಸಂಗಾಪೂರ ಗ್ರಾ.ಪಂ.ನಲ್ಲಿ ಜರುಗಿದೆ.

Advertisement

ತಾಲೂಕಿನ ಬಂಡಿಬಸಪ್ಪ ಕ್ಯಾಂಪಿನ ವಿಜಯಕುಮಾರ ಎಂಬುವವರು ಮನೆ ಹಕ್ಕು ಬದಲಾವಣೆ ಹಾಗೂ 11 ಬಿ ಫಾರಂ ನೀಡಲು ಅರ್ಜಿ ಸಲ್ಲಿಸಿ ಅಲೆದಾಡಿದರೂ ಕೆಲಸವಾಗದೇ ಇದ್ದಾಗ ಕಾರ್ಯದರ್ಶಿ ನೂರ ಉಲ್ಲಾಹಕ್ ಅವರು 6ಸಾವಿರ ರೂ.ಗಳ ಲಂಚ ಬೇಡಿಕೆ ಇಟ್ಟಿದ್ದಾರೆ. ಈ ವಿಷಯವನ್ನು ಜಿಲ್ಲಾ ಎಸಿಬಿ ಪೊಲೀಸರಿಗೆ ದೂರು ಸಲ್ಲಿಸಿದಾಗ ಮುಂಗಡವಾಗಿ 2 ಸಾವಿರ ಹಣ ನೀಡಿ ಉಳಿದ ಹಣ ಗುರುವಾರ ಕಾರ್ಯದರ್ಶಿ ಸ್ವೀಕಾರ ಮಾಡುವ ಸಂದರ್ಭದಲ್ಲಿ ಎಸಿಬಿ ಪೊಲೀಸರು ದಾಳಿ ನಡೆಸಿ ಕಾರ್ಯದರ್ಶಿ ನೂರ ಉಲ್ಲಾಹಕ್ ಹಾಗೂ ಪಿಡಿಒ ಪಿ.ಎಸ್.ಶೇಖಸಾಬ ಇವರನ್ನು ಬಂಧಿಸಿದ್ದಾರೆ.

ದಾಳಿಯ ಸಂದರ್ಭದಲ್ಲಿ ಎಸಿಬಿ ಎಸ್ಪಿ ಶ್ರೀಹರಿಬಾಬು ಹಾಗೂ ಡಿವೈಎಸ್ಪಿ ಶಿವಕುಮಾರ ಹಾಗೂ ಎಸಿಬಿ ಪೊಲೀಸರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next