Advertisement

ಗ್ರಾಮೀಣ ಗ್ರಂಥಪಾಲಕರಿಗೆ ವೇತನ ಪಾವತಿ

01:45 AM Oct 04, 2021 | Team Udayavani |

ಕುಂದಾಪುರ: ಪಂಚಾಯತ್‌ ರಾಜ್‌ ಇಲಾಖೆಯ ಅಧೀನದ ಗ್ರಾಮೀಣ ಗ್ರಂಥಾಲಯಗಳ ಗ್ರಂಥಪಾಲಕರಿಗೆ ಕೊನೆಗೂ 3 ತಿಂಗಳ ಬಾಕಿ ವೇತನ ಪಾವತಿಯಾಗಿದೆ.

Advertisement

ಜೂನ್‌ ತಿಂಗಳಿನಿಂದ ವೇತನ ಸಿಗದೇ ಅದನ್ನೇ ನಂಬಿರುವ ರಾಜ್ಯದ 5 ಸಾವಿರಕ್ಕೂ ಅಧಿಕ ಗ್ರಾಮೀಣ ಗ್ರಂಥಪಾಲಕರು ಸಂಕಷ್ಟ ಅನುಭವಿಸುತ್ತಿದ್ದರು. ಈಗ 3 ತಿಂಗಳ ಬಾಕಿ ಸಂಬಳದ ಜತೆಗೆ ಸೆಪ್ಟಂಬರ್‌ ತಿಂಗಳ ವರೆಗಿನ ಸಂಬಳ ಅವರ ಕೈಸೇರಿದೆ.

ಗ್ರಾಮೀಣ ಗ್ರಂಥಪಾಲಕರಿಗೆ ಹಿಂದೆ ಮಾಸಿಕ 7 ಸಾವಿರ ರೂ. ನೀಡಲಾಗುತ್ತಿದ್ದು, ಜೂನ್‌ನಿಂದ 12 ಸಾವಿರ ರೂ.ಗೆ ಹೆಚ್ಚಳ ಮಾಡಿ ಸರಕಾರ ಆದೇಶ ಹೊರಡಿಸಿತ್ತು. ಆದರೆ ಅದೇ ತಿಂಗಳಿನಿಂದ ಅವರಿಗೆ ಆತ್ತ ಹಿಂದಿನ ವೇತನವೂ ಇಲ್ಲ; ಇತ್ತ ಹೊಸ ವೇತನವೂ ಇಲ್ಲ ಎಂಬ ಸಂಕಷ್ಟದ ಪರಿಸ್ಥಿತಿ ಎದುರಾಗಿತ್ತು.

ಇದನ್ನೂ ಓದಿ:ಮೇಕೆದಾಟು ನಿಲುವಿಗೆ ಬದ್ಧ: ಸಿಎಂ ಬಸವರಾಜ ಬೊಮ್ಮಾಯಿ

ಉದಯವಾಣಿ ವರದಿ
ಗ್ರಾಮೀಣ ಗ್ರಂಥಾಲಯಗಳಲ್ಲಿ ಗ್ರಂಥಪಾಲಕರಾಗಿ ದುಡಿಯುತ್ತಿರುವವರಿಗೆ 3 ತಿಂಗಳಿನಿಂದ ವೇತನ ಪಾವತಿಯಾಗದ ಬಗ್ಗೆ “ಉದಯವಾಣಿ’ಯು ಸೆ. 19ರಂದು “ಗ್ರಾಮೀಣ ಗ್ರಂಥಪಾಲಕರ ಬದುಕು ಶೋಚನೀಯ’ ಎನ್ನುವುದಾಗಿ ವಿಶೇಷ ವರದಿ ಪ್ರಕಟಿಸಿ ಗಮನಸೆಳೆದಿತ್ತು. ನಮ್ಮ ಶೋಚನೀಯ ಬದುಕಿನ ಚಿತ್ರಣವನ್ನು ತೆರೆದಿಟ್ಟ “ಉದಯವಾಣಿ’ಯ ವರದಿಯಿಂದಾಗಿ ಸಂಬಂಧಪಟ್ಟವರು ಎಚ್ಚೆತ್ತುಕೊಂಡು ಬಾಕಿ ವೇತನ ಒಟ್ಟಿಗೆ ಸಿಗುವಂತಾಗಿದೆ. ಪತ್ರಿಕೆಗೆ ಕೃತಜ್ಞತೆಗಳು ಎಂದು ಕುಂದಾಪುರ ತಾಲೂಕು ಗ್ರಾಮೀಣ ಗ್ರಂಥಾಲಯ ನೌಕರರ ಸಂಘದ ಅಧ್ಯಕ್ಷ ಸುರೇಶ್‌ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next