Advertisement

ಜ.26ರಂದು ಪವಾರ್‌ ನೇತೃತ್ವದಲ್ಲಿ ಸಂವಿಧಾನ್‌ ಬಚಾವೋ ಜಾಥಾ

04:36 PM Jan 15, 2018 | udayavani editorial |

ಹೊಸದಿಲ್ಲಿ : ಸುಪ್ರೀಂ ಕೋರ್ಟಿನಲ್ಲಿ ಈಚೆಗೆ ಉಂಟಾಗಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇದೇ ಜನವರಿ 26ರಂದು ಎನ್‌ಸಿಪಿ ಅಧ್ಯಕ್ಷ ಶರದ್‌ ಪವಾರ್‌ ಮತ್ತು ಯೆಚೂರಿ ನೇತೃತ್ವದಲ್ಲಿ ಇದೇ ಜನವರಿ 26ರಂದು ಮುಂಬಯಿಯಲ್ಲಿ ಜಾಥಾ ನಡೆಯಲಿದೆ.

Advertisement

ಎನ್‌ಸಿಪಿ ವಕ್ತಾರ ನವಾಬ್‌ ಮಲಿಕ್‌ ಅವರನ್ನು ಈ ಬಗ್ಗೆ ಸಂಪರ್ಕಿಸಿದಾಗ “ಪವಾರ್‌ ಈ ಜಾಥಾದಲ್ಲಿ ಪಾಲ್ಗೊಳ್ಳುತ್ತಾರೆ’ ಎಂದು ಹೇಳಿದರು. ಆದರೆ ಇದರರ್ಥ ಎನ್‌ಸಿಪಿ ಈ ಜಾಥಾದ ಭಾಗವಾಗಿದೆ ಎಂದಲ್ಲ ಎಂದವರು ಸ್ಪಷ್ಟಪಡಿಸಿದರು. 

ಸಂವಿಧಾನ್‌ ಬಚಾವೋ ಹೆಸರಿನ ಈ ಜಾಥಾದಲ್ಲಿ ಪಾಲ್ಗೊಳ್ಳುವ ಇತರ ಪ್ರಮುಖರೆಂದರೆ ಕಾಂಗ್ರೆಸ್‌ ಶಾಸಕ ಅಲ್ಪೇಶ್‌ ಠಾಕೂರ್‌, ದಲಿತ ಕಾರ್ಯಕರ್ತ ಜಿಗ್ನೇಶ್‌ ಮೇವಾನಿ, ಪಾಟಿದಾರ್‌ ಚಳವಳಿಯ ನಾಯಕ ಹಾರ್ದಿಕ್‌ ಪಟೇಲ್‌, ರೈತ ನಾಯಕ ರಾಜು ಶೆಟ್ಟಿ. 

Advertisement

Udayavani is now on Telegram. Click here to join our channel and stay updated with the latest news.

Next