Advertisement

ಕಾರ್ಮಿಕರ ಕಷ್ಟಕ್ಕೆ ಸ್ಪಂದಿಸಿದ ಪವನ್‌

09:49 AM Mar 28, 2020 | Suhan S |

ಕೋವಿಡ್ 19 ಎಫೆಕ್ಟ್ ನಿಂದ ದ ಸದ್ಯ ಕನ್ನಡ ಚಿತ್ರರಂಗದ ಬಹುತೇಕ ಚಟುವಟಿಕೆಗಳು ಸ್ಥಗಿತಗೊಂಡಿದೆ. ಇನ್ನು ಕನ್ನಡ ಚಿತ್ರರಂಗವನ್ನೆ ಆಶ್ರಯಿಸಿದ್ದ ನೂರಾರು ಕಾರ್ಮಿಕರ ಬದುಕು ಮೂರಾಬಟ್ಟೆಯಾಗಿದೆ.

Advertisement

ಇಂಥ ಪರಿಸ್ಥಿತಿಯಲ್ಲಿ ಚಿತ್ರರಂಗದ ಕಾರ್ಮಿಕರಿಗೆ ನೆರವಾಗುವ ದೃಷ್ಟಿಯಿಂದ, ನಟ ಕಂ ನಿರ್ದೇಶಕ ಲೂಸಿಯಾ ಪವನ್‌ ಕುಮಾರ್‌ ಹೊಸ ಕೆಲಸಕ್ಕೆ ಮುಂದಾಗಿದ್ದಾರೆ. ಲೂಸಿಯಾ ಪವನ್‌ ಕುಮಾರ್‌ ತಮ್ಮ ಹಿಂದಿನ ಸಿನಿಮಾಗಳಿಗೆ ಕ್ರೌಡ್‌ ಫ‌ಂಡಿಂಗ್‌ ಮೂಲಕ ಹಣ ಸಂಗ್ರಹಿಸಿದಂತೆ, ಈಗ ಸಾಮಾಜಿಕ ಜಾಲತಾಣಗಳ ಮೂಲಕ ಸಿನಿಮಾ ಕಾರ್ಮಿಕರ ಸಲುವಾಗಿ ಫ‌ಂಡ್‌ ರೈಸ್‌ ಮಾಡಲು ಮುಂದಾಗಿದ್ದಾರೆ. ಹೀಗೆ ಸಂಗ್ರಹವಾದ ಹಣವನ್ನು ಅಗತ್ಯವಿರುವ ಸಿನಿಮಾ ಕಾರ್ಮಿಕರಿಗೆ ನೀಡುವ ಯೋಚನೆಯಿದ್ದು, ಕೇವಲ ನಾಲ್ಕು ದಿನಗಳ ಹಿಂದೆ ಶುರುವಾದ ಈ ಕಾರ್ಯದಿಂದ ಸದ್ಯಕ್ಕೆ ನಾಲ್ಕೂವರೆ ಲಕ್ಷದಷ್ಟು ಹಣ ಸಂಗ್ರಹವಾಗಿದೆ ಎಂದಿದ್ದಾರೆ ಪವನ್‌. ­

Advertisement

Udayavani is now on Telegram. Click here to join our channel and stay updated with the latest news.

Next