Advertisement

Pavagada ; ಹಾವು ಕಡಿದು ಅರು‌ ವರ್ಷದ ಬಾಲಕ ಸಾವು: ಆಸ್ಪತ್ರೆ ಎದುರು ಪ್ರತಿಭಟನೆ

09:55 PM Sep 24, 2023 | Team Udayavani |

ಪಾವಗಡ: ಮನೆಯಲ್ಲಿ ಮಲಗಿದ್ದ ವೇಳೆ ಹಾವು ಕಡಿದು ಬಾಲಕ ಸಾವನ್ನಪ್ಪಿರುವ ಘಟನೆ ಭಾನುವಾರ ಮುಂಜಾನೆ ಬೆಳಕಿಗೆ ಬಂದಿದೆ. ತಾಲೂಕಿನ ಕ್ಯಾತಗಾನಕೆರೆ ಗ್ರಾಮಕ್ಕೆ ಸೇರಿದ ನಾಗರಾಜು ಮಮತಾ ಎಂಬ ಅವರ ಮಗ ಅಶೋಕ್ (6)ಮೃತ ದುರ್ದೈವಿಯಾಗಿದ್ದಾನೆ.

Advertisement

ಶನಿವಾರ ರಾತ್ರಿ ಸುಮಾರು 11:30 ಗಂಟೆಗೆ ಕ್ಯಾತಗಾನಕೆರೆ ಗ್ರಾಮದ ಮನೆಯಲ್ಲಿ ಅಶೋಕ ಎಂಬ ಬಾಲಕನಿಗೆ ಹಾವು ಕಚ್ಚಿತ್ತು, ಗ್ರಾಮಸ್ಥರ ನೆರವಿನಿಂದ ರಾತ್ರಿ 12 ಗಂಟೆಗೆ ಪಾವಗಡದ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು, ಆದರೆ ಬೆಳಗಿನ ಜಾವ 3 ವರೆಗೂ ವೈದ್ಯರು ಇಲ್ಲದೆ ಚಿಕಿತ್ಸೆ ನೀಡಿದ ಕಾರಣ ತುಮಕೂರಿನ ಆಸ್ಪತ್ರೆಗೆ ಚಿಕಿತ್ಸೆಗೆಂದು ಕರೆದೊಯ್ಯುತ್ತಿದ್ದ ವೇಳೆ ಮಾರ್ಗ ಮಧ್ಯದಲ್ಲಿಯೇ ಯುವಕ ಮೃತಪಟ್ಟಿದ್ದನು ಎಂದು ತಿಳಿದು ಬಂದಿದೆ.

ವೈದ್ಯರ ನಿರ್ಲಕ್ಷ್ಯದ ವಿರುದ್ದ ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿ ಊರಿನ ಗ್ರಾಮಸ್ಥರು, ಪೋಷಕರು, ದಲಿತ ಸಂಘಟನೆಗಳ ಸಹಕಾರದೊಂದಿಗೆ ರಸ್ತೆ ತಡೆದು ಆಸ್ಪತ್ರೆ ಮುಂದೆ ಸಂಜೆ 6;45 ರಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ಘಟನೆ ತಿಳಿದು ಪಾವಗಡ ಸಿಪಿಐ ಸುರೇಶ್ ಹಾಗೂ ಸಿಬಂದಿ ಸ್ಥಳಕ್ಕೆ ಆಗಮಿಸಿದ್ದಾರೆ ಆದರೆ ವೈದ್ಯರು ಮಾತ್ರ ಪ್ರತಿಭಟನಾ ಸ್ಥಳಕ್ಕೆ ಇದುವರೆಗೂ ಬಂದಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next