Advertisement

ಕಲಘಟಗಿ ಅಭಿವೃದ್ಧಿಗೆ ಪಟ್ಟಣ ಪಂಚಾಯಿತಿ ಮುಂದಡಿ

08:03 PM Feb 08, 2023 | Team Udayavani |

– ಜನರಿಗೆ ಶುದ್ಧ ಕುಡಿಯುವ ನೀರು
– ಸ್ವತ್ಛತೆ-ಘನತ್ಯಾಜ್ಯ ವಿಲೇವಾರಿಗೆ ಒತ್ತು
– ಸಾಕಷ್ಟು ಅನುದಾನ ನೀಡಿದ ಶಾಸಕ ಸಿ.ಎಂ.ನಿಂಬಣ್ಣವರ
– ಸರ್ವಾಂಗ ಸುಂದರವಾಗಿ ರೂಪಗೊಳ್ಳುತ್ತಿರುವ ಪಟ್ಟಣ

Advertisement

ಕಲಘಟಗಿ ಪಟ್ಟಣವನ್ನು ಸರ್ವಾಂಗ ಸುಂದರ ಹಾಗೂ ಸ್ವತ್ಛತೆ ಹೊಂದಿದ ಪಟ್ಟಣವನ್ನಾಗಿಸಲು ಶಾಸಕ ಸಿ.ಎಂ. ನಿಂಬಣ್ಣವರ ಅವರ ಸಹಕಾರದಿಂದ ಇಲ್ಲಿಯ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ, ಮುಖ್ಯಾ ಧಿಕಾರಿಗಳು ಹಾಗೂ ಸಿಬ್ಬಂದಿ ಹಗಲಿರುಳು ಶ್ರಮಿಸಿ ಯಶಸ್ವಿಯಾಗಿದ್ದಾರೆ.

ಪಟ್ಟಣದಲ್ಲಿ ಸ್ವತ್ಛತೆ, ಬೀದಿದೀಪ, ಗಟಾರು, ಕಾಂಕ್ರೀಟ್‌ ರಸ್ತೆ, ಮನೆ ಮನೆಗೆ ನಲ್ಲಿ ಸಂಪರ್ಕ ಕಲ್ಪಿಸಿ ಶುದ್ಧ ಕುಡಿಯುವ ನೀರೊದಗಿಸುವಂತಹ ಮೂಲಭೂತ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಕಲ್ಪಿಸುವುದರ ಜತೆಗೆ ಸ್ವತ್ಛತೆಗೆ ಹೆಚ್ಚು ಒತ್ತು ನೀಡಿ ಕಾರ್ಯೋನ್ಮುಖವಾಗಿದೆ. ಘನತ್ಯಾಜ್ಯ ವಿಲೇವಾರಿ ಘಟಕದ ಅಭಿವೃದ್ಧಿಗೆ ಸಂಪೂರ್ಣ ರೂಪರೇಷೆಯೊಂದಿಗೆ ಗುಣಮಟ್ಟದ ನಿರ್ವಹಣೆಗೆ ಹೆಚ್ಚು ಮಹತ್ವ ನೀಡಲಾಗಿದೆ.

ಪಪಂ ಅಧ್ಯಕ್ಷ-ಉಪಾಧ್ಯಕ್ಷರಾದಿಯಾಗಿ ಪ್ರತಿ ವಾರ್ಡ್‌ ಸದಸ್ಯರ ಮತ್ತು ನಾಮನಿರ್ದೇಶಿತ ಸದಸ್ಯರ ಸಹಭಾಗಿತ್ವದಲ್ಲಿ ಪಟ್ಟಣದ ಸರ್ವಾಂಗೀಣ ಅಭಿವೃದ್ಧಿಗೆ ಮುಂದಡಿ ಇರಿಸಲಾಗಿದೆ. ಜತೆಗೆ ಆಡಳಿತದ ದೂರದರ್ಶಿತ್ವದ ಕಲ್ಪನೆಯುಳ್ಳ ಪಪಂ ಮುಖ್ಯಾ ಧಿಕಾರಿ ವಾಯ್‌.ಜಿ. ಗದ್ದಿಗೌಡರ ಅವರ ಕಳಕಳಿ ಹಾಗೂ ಇಂಜಿನಿಯರ್‌ ಸೇರಿದಂತೆ ನೌಕರ ವರ್ಗದವರ ಕ್ರಿಯಾತ್ಮಕತೆ ಜನಮೆಚ್ಚುಗೆ ಗಳಿಸಿದೆ. ಶಾಸಕ ಸಿ.ಎಂ.ನಿಂಬಣ್ಣವರ ಅವರು ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿ ಮಾರ್ಗದರ್ಶನ ನೀಡುತ್ತಿದ್ದಾರೆ.

Advertisement

ಘನತ್ಯಾಜ್ಯ ನಿರ್ವಹಣೆ, ಅಗತ್ಯ ಮೂಲಸೌಕರ್ಯ ಪೂರ್ಣಗೊಳಿಸುವ ಯೋಜನೆ ಮತ್ತು ಸಂಗ್ರಹಣೆ, ಸಂಸ್ಕರಣೆ ಇದರಿಂದ ಬರುವ ಆದಾಯ ಉತ್ಪಾದನೆಯಲ್ಲಿ ಉತ್ತಮ ಪ್ರಗತಿ ಸಾಧಿ ಸಲಾಗುತ್ತಿದೆ. 2011ನೇ ಜನಗಣತಿ ಪ್ರಕಾರ ಪಟ್ಟಣದಲ್ಲಿ 16,917 ಜನಸಂಖ್ಯೆಯ ಅನುಗುಣವಾಗಿ 5 ಕಂದಾಯ ವಾರ್ಡ್‌, 17 ಚುನಾವಣಾ ವಾರ್ಡ್‌ಗಳನ್ನು ಹೊಂದಿದೆ. ಪ್ರತಿ ವಾರ್ಡ್‌ನ ಮನೆ ಮನೆಗೆ ತೆರಳಿ ಹಸಿ ಕಸ, ಒಣ ಕಸ ತ್ಯಾಜ್ಯ ಬೇರ್ಪಡಿಸುವುದರೊಂದಿಗೆ ಸಂಗ್ರಹಿಸಿ ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಾಗಿಸಲಾಗುತ್ತಿದ್ದು, ಪ್ರತಿ ನಿತ್ಯ 6 ರಿಂದ 7 ಟನ್‌ ಘನ ತ್ಯಾಜ್ಯ ಸಂಗ್ರಹಿಸಲಾಗುತ್ತಿದೆ. ಅಂದಿನ ಕಸವನ್ನು ಅಂದೇ ವಿಲೇವಾರಿ ಮಾಡಲು ಸಹಕಾರಿಯಾಗಿ ಎರೆಹುಳ ಗೊಬ್ಬರ ತಯಾರಿಕೆ ಘಟಕ ಆರಂಭಿಸಲಾಗಿದೆ ಅಲ್ಲದೇ ತಯಾರಾದ ಗೊಬ್ಬರ ಮಾರಾಟ ಮಾಡಲಾಗುತ್ತದೆ. ಒಣ ಕಸದಿಂದ ಬರುವ ಮರು ಬಳಕೆ ತ್ಯಾಜ್ಯಗಳನ್ನು ಪ್ಲಾಸ್ಟಿಕ್‌ ಹಾಗೂ ಆರ್‌ಡಿಎಫ್‌ ಕಸ ಬೇರ್ಪಡಿಸಿ ಸಿಮೆಂಟ್‌ ಕಾರ್ಖಾನೆಗಳಿಗೆ ಕಳುಹಿಸಲಾಗುತ್ತಿದೆ. ಈಗಾಗಲೇ ಹಲವಾರು ವರ್ಷಗಳಿಂದ ಸಂಗ್ರಹಿಸಿಟ್ಟಿದ್ದ ಪಾರಂಪರಿಕ ತ್ಯಾಜ್ಯ ಅಂದಾಜಿಸಲಾಗಿದ್ದು, ಸುಮಾರು ಏಳು ಸಾವಿರ ಟನ್‌ನಷ್ಟು ದಾಸ್ತಾನಿದೆ. ಅದನ್ನು ವಿಲೇವಾರಿ ಮಾಡಲು ಸೂಕ್ತ ಕ್ರಮ ಜರುಗಿಸಲಾಗುತ್ತಿದೆ. ಘನತ್ಯಾಜ್ಯ ವಿಲೇವಾರಿ ಘಟಕಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯನ್ನು ಸಿಸಿ ರಸ್ತೆಯನ್ನಾಗಿ ಅಭಿವೃದ್ಧಿ ಪಡಿಸಲಾಗಿದೆ.

ಪಟ್ಟಣದ ಅಭಿವೃದ್ಧಿಗೆ ಸಹಕಾರಿಯಾಗುವಂತಹ ಯಂತ್ರೋಪಕರಣಗಳುಳ್ಳ ವಾಹನಗಳನ್ನು ಖರೀದಿಸಲಾಗಿದ್ದು, ಅವೆಲ್ಲವುಗಳ ಸದ್ಬಳಕೆ ಪಡೆಯಲಾಗುತ್ತಿದೆ. ಪಟ್ಟಣದ ಹೃದಯ ಭಾಗದಲ್ಲಿದ್ದ ಚಾವಡಿ ಜಾಗೆಯನ್ನು ಪಪಂದಿಂದ ಅಭಿವೃದ್ಧಿ ಪಡಿಸಿ, ಸುಸಜ್ಜಿತ ಶೌಚಾಲಯಗಳೊಂದಿಗೆ ನಿರ್ಮಿಸುತ್ತಿರುವ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದೆ. ನಗರೋತ್ಥಾನ ಯೋಜನೆಯಡಿಯಲ್ಲಿ ಶಾಸಕರ ಪರಿಶ್ರಮದಿಂದ ಯುವಶಕ್ತಿ ಸರ್ಕಲ್‌ ಬಳಿಯಲ್ಲಿನ ಕಂದಾಯ ಇಲಾಖೆ ಜಾಗೆಯನ್ನು ಪಟ್ಟಣ ಪಂಚಾಯಿತಿಗೆ ಪಡೆದು ಎರಡು ಕೋಟಿ ರೂ.ಗಳ ವೆಚ್ಚದಲ್ಲಿ ಸುಸಜ್ಜಿತ ಆಡಿಟೋರಿಯಂ ನಿರ್ಮಾಣಕ್ಕೆ ಈಗಾಗಲೇ ಯೋಜನೆ ತಯಾರಿಸಿದ್ದು ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳಬೇಕಿದೆ.

ಅಮೃತ ನೈರ್ಮಲ್ಯ ಯೋಜನೆಯಡಿಯಲ್ಲಿ ಪಪಂ ಅಭಿವೃದ್ಧಿ ಮತ್ತು ಸೌಂದಯೀìಕರಣಕ್ಕೆ ಸರಕಾರ ಒಂದು ಕೋಟಿ ರೂ.ಗಳ ವಿಶೇಷ ಅನುದಾನ ನೀಡಿದ್ದು, ಅದರಲ್ಲಿ ವಿಶೇಷವಾಗಿ ಹಳಿಯಾಳ ರಸ್ತೆಯಲ್ಲಿನ ಎರಡು ಉದ್ಯಾನವನಗಳ ಅಭಿವೃದ್ಧಿ ಪಡಿಸುವ ಮೂಲಕ ಸೌಂದಯೀìಕರಣ ಇಮ್ಮಡಿಗೊಳಿಸಿರುವುದಲ್ಲದೇ ವಾಯು ವಿಹಾರಿಗಳಿಗೆ ಅನುಕೂಲ ಕಲ್ಪಿಸಲಾಗಿದೆ. ಪಟ್ಟಣ ವ್ಯಾಪ್ತಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿಯನ್ನು ಚತುಷ್ಪಥ ರಸ್ತೆಯನ್ನಾಗಿಸಿ ದಾರಿದೀಪಗಳಿಂದ ಬೆಳಗಿಸಿರುವುದು ಪಟ್ಟಣದ ಸೌಂದಯೀìಕರಣದ ಮೆರಗು ಇಮ್ಮಡಿಗೊಳಿಸಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next