Advertisement

ಕುರಿಗಾಯಿಯ ಟೆಂಟ್ ನಲ್ಲಿ ಅರಳಿದ ದೇಶಪ್ರೇಮ: ತೋಟದ ಟೆಂಟ್ ನಲ್ಲಿ ಹಾರಿದ ರಾಷ್ಟ್ರಧ್ವಜ

11:13 AM Aug 14, 2022 | Team Udayavani |

ಚಿಕ್ಕಮಗಳೂರು: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂಭ್ರಮದಲ್ಲಿ ದೇಶದ ಮನೆಮನೆಯಲ್ಲೂ ತ್ರಿವರ್ಣ ಧ್ವಜ ಹಾರಿಸಬೇಕು ಎಂದು ಸರ್ಕಾರ ಕರೆ ನೀಡಿದೆ. ಹರ್ ಘರ್ ತಿರಂಗ ಅಭಿಯಾನದ ಅಂಗವಾಗಿ ಮೂರು ದಿನ ಎಲ್ಲೆಡೆ ರಾಷ್ಟ್ರಧ್ವಜ ಹಾರಿಸಲಾಗುತ್ತಿದೆ.

Advertisement

ಇದೇ ವೇಳೆ ಚಿಕ್ಕಮಗಳೂರಿನ ಕುರಿಗಾಯಿಯ ಟೆಂಟ್ ನಲ್ಲೂ ತ್ರಿವರ್ಣ ಬಾವುಟ ಹಾರಿದ್ದು ಗಮನ ಸೆಳೆಯಿತು. ಕಡೂರು ತಾಲೂಕಿನ ಪಂಚನಹಳ್ಳಿಯ ತೋಟವೊಂದರಲ್ಲಿ ಹಾಕಿದ್ದ ಟೆಂಟ್ ನಲ್ಲಿ ಕುರಿಗಾಯಿ ಧ್ವಜ ಹಾರಿಸಿ ಮಾದರಿಯಾಗಿದ್ದಾನೆ.

ಇದನ್ನೂ ಓದಿ:ರಾಕೇಶ್ ಜುಂಜುನ್ ವಾಲಾ: ಸಿಎ ಆಗಬೇಕೆಂದಿದ್ದ ಹುಡುಗ ದಲಾಲ್ ಸ್ಟ್ರೀಟ್ ಅಧಿಪತಿಯಾಗಿದ್ದು ಹೇಗೆ?

ಊರೂರು ಅಲೆಯುತ್ತಾ ಕುರಿಕಾಯುವ ಈತ ಚಿತ್ರದುರ್ಗ ಮೂಲದವನು. ಸದ್ಯ ಕಡೂರಿನ ಪಂಚನಹಳ್ಳಿಯಲ್ಲಿ ಟೆಂಟ್ ಹಾಕಿರುವ ಆತ ಅಲ್ಲೇ ಹರ್ ಘರ್ ತಿರಂಗ ಅಭಿಯಾನಕ್ಕೆ ಬೆಂಬಲ ಸೂಚಿಸಿದ್ದಾನೆ.

Advertisement

Udayavani is now on Telegram. Click here to join our channel and stay updated with the latest news.

Next