Advertisement

ಒಂದೇ ವೇದಿಕೆಯಲ್ಲಿ ಪಾಟೀಲ-ಬಣಕಾರ!

11:28 PM Nov 03, 2019 | Lakshmi GovindaRaju |

ಹಿರೇಕೆರೂರ: ರಾಜಕೀಯ ಬದ್ಧ ವೈರಿಗಳಾಗಿ ಚುನಾವಣಾ ಕಣದಲ್ಲಿ ಕಾದಾಡುತ್ತಿದ್ದ ಬಿ.ಸಿ. ಪಾಟೀಲ ಹಾಗೂ ಯು.ಬಿ. ಬಣಕಾರ ಭಾನುವಾರ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡು ಗಮನ ಸೆಳೆದರು. ಕನ್ನಡ ರಾಜ್ಯೋತ್ಸವ ನಿಮಿತ್ತ ಸಂಘಟಿಸಲಾಗಿದ್ದ ಹಿರೇಕೆರೂರ-ರಟ್ಟಿಹಳ್ಳಿ ತಾಲೂಕು ಮಟ್ಟದ ಕಬಡ್ಡಿ ಪಂದ್ಯಾವಳಿ ಕಾರ್ಯಕ್ರಮದಲ್ಲಿ ಉಭಯ ನಾಯಕರು ಸಮಾಗಮಗೊಂಡು ಹೊಸ ರಾಜಕೀಯ ಮನ್ವಂತರಕ್ಕೆ ಸಾಕ್ಷಿಯಾದರು.

Advertisement

“ನನ್ನ ಹಾಗೂ ಬಿ.ಸಿ.ಪಾಟೀಲ ಅವರನ್ನು ನೋಡಿ, ನಮ್ಮಂತೆ ನಿಮ್ಮಲ್ಲೂ ಸೋಲು-ಗೆಲುವು ಸಮಾನವಾಗಿ ಸ್ವೀಕರಿಸುವ ಗುಣ ಬರಬೇಕು. ತಾಲೂಕು ಅಭಿವೃದ್ಧಿ ಹಾಗೂ ಬಿಎಸ್‌ವೈ ಸಿಎಂ ಆಗಿ ಮುಂದುವರಿಯಲು ಅವರಿಗೆ ಸಹಕಾರ ನೀಡುತ್ತೇನೆಂದು’ ಮಾಜಿ ಶಾಸಕ, ರಾಜ್ಯ ಉಗ್ರಾಣ ನಿಗಮ ಅಧ್ಯಕ್ಷ ಯು.ಬಿ.ಬಣಕಾರ ಹೇಳಿದರೆ, “ನಾನು ಹಾಗೂ ಯು.ಬಿ.ಬಣಕಾರ ಬಹಳ ಕುಸ್ತಿ ಆಡಿದ್ದೇವೆ. ತಾಲೂಕಿನ ಹಿತದೃಷ್ಟಿಯಿಂದ ಈಗ ಸ್ನೇಹಿತರಾಗಿದ್ದೇವೆ. ಮುಂದಿನ ದಿನಗಳಲ್ಲಿ ನಾವಿಬ್ಬರೂ ಸೇರಿ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಕೆಲಸ ಮಾಡಬೇಕಾಗಿದೆ’ ಎಂದು ಅನರ್ಹ ಶಾಸಕ ಬಿ.ಸಿ. ಪಾಟೀಲ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next