Advertisement

ಪ್ರಯಾಣಿಕರ ರಕ್ಷಿಸಿ ಪ್ರಾಣ ಬಿಟ್ಟ ಚಾಲಕ

11:02 PM Feb 05, 2020 | Lakshmi GovindaRaj |

ಶಿಕಾರಿಪುರ: ಬಸ್‌ ಚಲಾಯಿಸುತ್ತಿದ್ದಾಗಲೇ ಹೃದಯಾಘಾತಕ್ಕೊಳಗಾದ ಚಾಲಕ ಆ ಸಂದರ್ಭದಲ್ಲೂ ಸಮಯ ಪ್ರಜ್ಞೆ ಮೆರೆದು ಪ್ರಯಾಣಿಕರನ್ನು ಬಚಾವ್‌ ಮಾಡಿ ನಂತರ ತಾನು ಪ್ರಾಣ ಬಿಟ್ಟಿದ್ದಾನೆ. ಬುಧವಾರ ಬೆಳಗ್ಗೆ ಶಿಕಾರಿಪುರ ಸಮೀಪದ ಕೆಂಗಟ್ಟೆ ಬಳಿ ಈ ದುರ್ಘ‌ಟನೆ ಸಂಭವಿಸಿದ್ದು, ಶಿಕಾರಿಪುರ ತಾಲೂಕಿನ ಬಗನಕಟ್ಟೆಯ ಚಾಲಕ ಕುಮಾರ್‌ (32) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

Advertisement

ಬಸ್‌ನಲ್ಲಿದ್ದ ಪ್ರಯಾಣಿಕರಲ್ಲಿ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಖಾಸಗಿ ಬಸ್‌ (ಕುಮದ್ವತಿ) ಶಿಕಾರಿಪುರದಿಂದ ಹೊನ್ನಾಳಿಗೆ ಹೊರಟಿತ್ತು. ಬಸ್‌ನಲ್ಲಿ ಸಾಕಷ್ಟು ಪ್ರಯಾಣಿಕರಿದ್ದರು. ಬಸ್‌ ಕೆಂಗಟ್ಟೆ ಗ್ರಾಮದ ಬಳಿ ಬರುತ್ತಿದ್ದಂತೆ ಚಾಲಕ ಕುಮಾರ್‌ ಹೃದಯಾಘಾತಕ್ಕೊಳಗಾಗಿದ್ದಾರೆ. ಎದೆ ನೋವು ಬರುತ್ತಿದ್ದಂತೆ ಬಸ್‌ನ ವೇಗ ನಿಯಂತ್ರಿಸಿ ನಿಲ್ಲಿಸಲು ಯತ್ನಿಸಿದ್ದಾರೆ.

ಅಲ್ಲದೆ ತಕ್ಷಣ ಬಸ್‌ನ್ನು ರಸ್ತೆ ಎಡಭಾಗಗಕ್ಕೆ ಇಳಿಸಿ ಮರಕ್ಕೆ ಡಿಕ್ಕಿಯಾಗುವಂತೆ ಮಾಡಿ ಬಸ್‌ ನಿಲ್ಲಿಸಿದ್ದಾರೆ. ಇದರಿಂದ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಯಾವುದೇ ಅನಾಹುತ ಸಂಭವಿಸಿಲ್ಲ. ಚಾಲಕನ ಸಾವಿಗೆ ಬಸ್‌ ಚಾಲಕರು- ಮಾಲೀಕರ ಸಂಘದವರು ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next