Advertisement

ಎನ್‌ಡಿಎಯಲ್ಲಿ ಸಿಗದ ಪ್ರಾತಿನಿಧ್ಯ: ಕೇಂದ್ರ ಸಚಿವ ಸ್ಥಾನಕ್ಕೆ ಪರಸ್‌ ರಾಜೀನಾಮೆ

10:54 PM Mar 19, 2024 | Team Udayavani |

ನವದೆಹಲಿ/ಪಾಟ್ನಾ: ಬಿಹಾರದಲ್ಲಿ ತಮ್ಮ ಪಕ್ಷಕ್ಕೆ 1 ಸ್ಥಾನ ನೀಡದಿದ್ದ ಬಗ್ಗೆ ಮುನಿಸಿರುವ ರಾಷ್ಟ್ರೀಯ ಲೋಕ ಜನಶಕ್ತಿ (ಆರ್‌ಎಲ್‌ಜೆ) ನಾಯಕ ಪಶುಪತಿ ಕುಮಾರ್‌ ಪರಸ್‌ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದರ ಜತೆಗೆ ಅವರು, ಎನ್‌ಡಿಎ ತೊರೆವ ಸಾಧ್ಯತೆ ಇದೆ. ಅದಕ್ಕೆ ಪೂರಕವಾಗಿ ಇಂಡಿಯಾ ಒಕ್ಕೂಟ ಸೇರ್ಪಡೆಯಾಗುವಂತೆ ಪರಸ್‌ಗೆ ಆರ್‌ಜೆಡಿ ನಾಯಕ ತೇಜ್‌ಪ್ರತಾಪ್‌ ಯಾದವ್‌ ಆಫ‌ರ್‌ ನೀಡಿದ್ದಾರೆ.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾರಸ್‌, “ಸೀಟು ಹಂಚಿಕೆ ವಿಷಯದಲ್ಲಿ ಬಿಜೆಪಿ ನಮ್ಮ ಪಕ್ಷಕ್ಕೆ ಅನ್ಯಾಯ ಮಾಡಿದೆ. ಪ್ರಧಾನಿ ಮೋದಿ ಅವರಿಗೆ ಧನ್ಯವಾದಗಳು’ ಎಂದು ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಬಿಹಾರ ಡಿಸಿಎಂ ವಿಜಯ್‌ ಕುಮಾರ್‌ ಸಿನ್ಹಾ, “ಪಶುಪತಿ ಪರಸ್‌ ಮತ್ತು ಉಪೇಂದ್ರ ಕುಶ್ವಾಹ ಪ್ರತಿಪಕ್ಷಗಳ ಒಕ್ಕೂಟಕ್ಕೆ ಸೇರುವುದು ತಪ್ಪು ನಿರ್ಧಾರವಾಗಲಿದೆ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next