Advertisement

Parliament ಹೊಗೆ ಬಾಂಬ್‌: ಆರೋಪಿಗಳ ವಿಚಾರಣೆಗೆ ಲೆಫ್ಟಿನೆಂಟ್‌ ಗವರ್ನರ್‌ ಅನುಮತಿ

11:58 PM Jun 06, 2024 | Team Udayavani |

ಹೊಸದಿಲ್ಲಿ: ಸಂಸತ್‌ ಭವನದಲ್ಲಿ ಹೊಗೆ ಬಾಂಬ್‌ ಎಸೆದ ಪ್ರಕರಣದಲ್ಲಿನ 6 ಆರೋಪಿಗಳನ್ನು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ(ಯುಎಪಿಎ)ಯ ಅಡಿಯಲ್ಲಿ ವಿಚಾರಣೆಗೊಳಪಡಿಸಲು ದೆಹಲಿ ಲೆಫ್ಟಿನೆಂಟ್‌ ಗವರ್ನರ್‌ ವಿ.ಕೆ.ಸಕ್ಸೇನಾ ಅನುಮತಿಸಿದ್ದಾರೆ.

Advertisement

ಆರೋಪದ ಬಗ್ಗೆ ಅಗತ್ಯ ಸಾಕ್ಷ್ಯಗಳು ದೊರೆತಿರುವ ಕಾರಣ ಯುಎಪಿಎ ಅಡಿಯಲ್ಲಿ ತನಿಖೆ ನಡೆಸಲು ಅವಕಾಶ ನೀಡಬೇಕೆಂದು ಪೊಲೀಸರು ಕೇಳಿಕೊಂಡಿದ್ದರು. ಇದೇ ವೇಳೆ, ಶುಕ್ರವಾರ ಆರೋಪಿಗಳಾದ ಕರ್ನಾಟಕ ಮೂಲದ ಮನೋರಂಜನ್‌.ಡಿ, ಸಾಗರ್‌ ಶರ್ಮಾ, ಅಮೊಲ್‌ ಧನರಾಜ್‌ ಶಿಂಧೆ, ನೀಲಂ ರನೋಲಿಯಾ, ಲಲಿತ್‌ ಝಾ, ಮಹೇಶ್‌ ಕುಮಾವತ್‌ ವಿರುದ್ಧ ಚಾರ್ಜ್‌ಶೀಟ್‌ ಸಲ್ಲಿಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next