Advertisement

Parliament: ಸಂಸತ್‌ ಭದ್ರತಾ ಲೋಪ- ಆರೋಪಿಗಳ ವಿಚಾರಣೆ

12:29 AM Jan 03, 2024 | Team Udayavani |

ಹೊಸದಿಲ್ಲಿ: ಡಿ.13ರ ಸಂಸತ್‌ ಭದ್ರತಾ ಲೋಪ ಪ್ರಕರಣದಲ್ಲಿ ಬಂಧಿತರಾಗಿರುವ ಆರು ಆರೋಪಿಗಳನ್ನು ದಿಲ್ಲಿ ಪೊಲೀಸರು ಮಂಗಳವಾರ ಮುಖಾಮುಖೀ ವಿಚಾರಣೆ ನಡೆಸಿದರು.

Advertisement

ಆರೋಪಿಗಳಾದ ಸಾಗರ್‌ ಶರ್ಮಾ, ಮನೋರಂಜನ್‌ ಡಿ., ನೀಲಂ ಆಜಾದ್‌, ಅಮೋಲ್‌ ಶಿಂಧೆ, ಲಲಿತ್‌ ಝಾ ಮತ್ತು ಮಹೇಶ್‌ ಕುಮಾವಟ್‌ ಅವರನ್ನು ದಿಲ್ಲಿ ಪೊಲೀ ಸರು ನೇರವಾಗಿ ವಿಚಾರಣೆ ನಡೆಸುತ್ತಿರುವುದು ಇದು ಎರಡನೇ ಬಾರಿ. ಮನೋರಂಜನ್‌ ಮತ್ತು ನೀಲಂನನ್ನು ದಿಲ್ಲಿ ಪೊಲೀಸರ ವಿಶೇಷ ಘಟಕದ ಗುಪ್ತಚರ ವಿಭಾಗದ ಕಚೇರಿಯಲ್ಲಿ ಹಾಗೂ ಉಳಿದ ನಾಲ್ವರು ಆರೋಪಿ ಗಳನ್ನು ವಿಶೇಷ ಘಟಕದ ವಿವಿಧ ಕಚೇ ರಿಗಳಲ್ಲಿ ವಿಚಾರಣೆ ನಡೆಸಲಾಯಿತು.

ಈ ಪ್ರಕರಣಕ್ಕಾಗಿ ನೇಮಿಸಿರುವ ವಿಶೇಷ ತಂಡವು ಆರೋಪಿಗಳನ್ನು ವಿವಿಧ ಮಜಲುಗಳಲ್ಲಿ ವಿಚಾರಣೆ ನಡೆಸಿತು ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next