Advertisement

ನಗರಕ್ಕೆ ಮಲ್ಟಿ ಲೆವೆಲ್‌ ಕಾರು ಪಾರ್ಕಿಂಗ್‌; ಕಡತದಲ್ಲೇ ಬಾಕಿ!

11:20 PM Jan 13, 2021 | Team Udayavani |

ಮಹಾನಗರ: ಮಂಗಳೂರು  ನಗರದಲ್ಲಿ ಪಾರ್ಕಿಂಗ್‌ ಸಮಸ್ಯೆ ಭವಿಷ್ಯದಲ್ಲಿ ಬಿಗಡಾಯಿಸಬಹುದು ಎನ್ನುವ ದೂರ ದೃಷ್ಟಿಯ ಚಿಂತನೆಯೊಂದಿಗೆ ದಶಕದ ಹಿಂದೆಯೇ ಹಂಪನಕಟ್ಟೆಯ ಹಳೆ ಬಸ್‌ ನಿಲ್ದಾಣ ಪ್ರದೇಶದಲ್ಲಿ ಬಹು ಅಂತಸ್ತಿನ ಪಾರ್ಕಿಂಗ್‌ ಸಂಕೀರ್ಣ ನಿರ್ಮಾಣ ಮಾಡುವ ಪ್ರಸ್ತಾವ ಮಾಡಲಾಗಿತ್ತು. ವಿಪರ್ಯಾಸವೆಂದರೆ ನಗರದ ಹೃದಯಭಾಗದ ಪಾರ್ಕಿಂಗ್‌ ಸಮಸ್ಯೆಗೆ ಒಂದು ಹಂತದಲ್ಲಿ ಪರಿಹಾರ ಒದಗಿಸಬಹುದಾದ ಈ ಬಹುಮಹಡಿ ಪಾರ್ಕಿಂಗ್‌ ಸಂಕೀರ್ಣ ಯೋಜನೆ ಇನ್ನೂ ಕಾರ್ಯರೂಪಕ್ಕೆ ಬಂದಿಲ್ಲ.

Advertisement

ಈ ಯೋಜನೆ ಕಡತ ಈಗ ಮಂಗಳೂರು ಪಾಲಿಕೆ-ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಹಾಗೂ ಸದ್ಯ ಸ್ಮಾರ್ಟ್‌ಸಿಟಿಯ ಮಧ್ಯೆ ಅತ್ತಿಂದಿತ್ತ ಕೈ ಬದಲಾಗುತ್ತಿದೆಯೇ ಹೊರತು ಯೋಜನೆ ಸಾಕಾರಗೊಳ್ಳುವ ಲಕ್ಷಣ ಕಾಣಿಸುತ್ತಿಲ್ಲ! ಹಂಪನಕಟ್ಟೆಯಲ್ಲಿ ಸುಮಾರು 1.50 ಎಕರೆ ಸರಕಾರಿ ಮತ್ತು ಉಳಿದ ಖಾಸಗಿ ಜಾಗ ಸೇರಿ ಅಂದಾಜು 2.10 ಎಕ್ರೆ ಪ್ರದೇಶ ದಲ್ಲಿ ಬಹುಮಹಡಿ ವಾಣಿಜ್ಯ/ವಾಹನ ನಿಲು ಗಡೆ ಕಾಂಪ್ಲೆಕ್ಸ್‌ ನಿರ್ಮಿಸುವ ಯೋಜನೆ ಯಾಗಿ ದೆ. ಪಾಲಿಕೆಯೇ ಈ ಯೋಜನೆಯನ್ನು ಜಾರಿಗೊಳಿಸುವ ಬಗ್ಗೆ ಈ ಹಿಂದೆ ಯೋಚಿಸಿ ತ್ತಾದರೂ ಅದು ಕಾರ್ಯಗತವಾಗದ ಕಾರಣದಿಂದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ವತಿಯಿಂದ ಈ ಯೋಜನೆ ಮುಂ ದುವರಿಸುವ ಬಗ್ಗೆ ಚಿಂತಿಸಲಾಗಿತ್ತು. ಅದೂ ಈಡೇರದೆ ಮೂರು ವರ್ಷದ ಹಿಂದೆ ಇದನ್ನು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಇದಕ್ಕೆ 91 ಕೋ.ರೂ. ವೆಚ್ಚ ಅಂದಾಜಿಸಲಾಗಿದೆ. ಸಾರ್ವಜನಿಕ ಸಹಭಾಗಿತ್ವದಲ್ಲಿ ಈ ಯೋಜನೆ ಯನ್ನು ಅನುಷ್ಠಾನಗೊಳಿಸುವುದಕ್ಕೆ ಉದ್ದೇಶಿ ಸಲಾಗಿದೆ.

ಯಾರಿಗೆ ಲಾಭ?:

ಜ್ಯೋತಿ, ಫಳ್ನೀರು ಭಾಗದಿಂದ ಸ್ಟೇಟ್‌ ಬ್ಯಾಂಕ್‌ ಸಂಪರ್ಕ ರಸ್ತೆ ಹಂಪನಕಟ್ಟೆ ಆಗಿರು ವುದರಿಂದ ಇಲ್ಲಿ ವಾಹನ ದಟ್ಟಣೆ ಅಧಿಕ. ಇನ್ನು ಕೆಎಸ್‌ ರಾವ್‌ ರಸ್ತೆಯೂ ವಾಹನ ದಟ್ಟಣೆಯ ಪ್ರದೇಶ. ಜತೆಗೆ ಸಮೀಪದಲ್ಲಿಯೇ ಹಲವು ವಾಣಿಜ್ಯ ಸಂಕೀರ್ಣಗಳು, ವೆನಾÉಕ್‌ ಆಸ್ಪತ್ರೆ, ಸೆಂಟ್ರಲ್‌ ಮಾರುಕಟ್ಟೆ ಸಹಿತ ನಿತ್ಯ ಜನನಿಬಿಡ ಪ್ರದೇಶ ಇದಾಗಿ ರುವುದರಿಂದ ಈ ವ್ಯಾಪ್ತಿಗೆ ಬರುವ ವಾಹನಗಳ ನಿಲುಗಡೆಗೆ ನೂತನ ಮಲ್ಟಿ ಲೆವೆಲ್‌ ಕಾರ್‌ ಪಾರ್ಕಿಂಗ್‌ ಅನುಕೂಲ ವಾಗಬಹುದು.

2009ಯೋಜನೆ! :

Advertisement

ಮಂಗಳೂರಿನಲ್ಲಿ ವಾಹನ ನಿಲುಗಡೆ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಹತ್ತು ಕಡೆಗಳಲ್ಲಿ ಬಹು ಅಂತಸ್ತು (ಮಲ್ಟಿಲೆವೆಲ…) ವಾಹನ ನಿಲುಗಡೆ ತಾಣಗಳನ್ನು ನಿರ್ಮಿಸುವ ಇಂಗಿತವನ್ನು 2009ರ ನ. 25ರಂದು ಅಂದಿನ ರಾಜ್ಯ ನಗರಾಭಿವೃದ್ದಿ ಸಚಿವ ಸುರೇಶ್‌ ಕುಮಾರ್‌ ವ್ಯಕ್ತಪಡಿಸಿದ್ದರು. ಇದಕ್ಕಾಗಿ ಮೊದಲ ತಾಣವನ್ನು ಹಂಪನಕಟ್ಟೆಯ ಹಳೆ ಬಸ್‌ ತಂಗುದಾಣವನ್ನು ಗುರುತಿಸಲಾಗಿತ್ತು. ಆದರೆ ಅನಂತರ ಯಾವ ಕಾರ್ಯವೂ ಆಗಲಿಲ್ಲ.

ಬೆಂಗಳೂರಿನಲ್ಲಿ ಬಹುಮಹಡಿ ಪಾರ್ಕಿಂಗ್‌ ವ್ಯವಸ್ಥೆ :

ಹೊಸದಿಲ್ಲಿ, ಬೆಂಗಳೂರು, ಮುಂಬಯಿ ಸಹಿತ ಮಹಾನಗರಗಳಲ್ಲಿ ಬಹು ಅಂತಸ್ತು ವಾಹನ ಪಾರ್ಕಿಂಗ್‌ ವ್ಯವಸ್ಥೆ ಜಾರಿಯಲ್ಲಿದೆ. ಬೆಂಗಳೂರಿನ ಮೂರು ಕಡೆಗಳಲ್ಲಿ ಜಾರಿಯಲ್ಲಿರುವ ಮಲ್ಟಿ ಲೆವೆಲ್‌ ಪಾರ್ಕಿಂಗ್‌ ವ್ಯವಸ್ಥೆ ಅಲ್ಲಿನ ಒಟ್ಟು ವಾಹನ ದಟ್ಟಣೆ ನಿಭಾಯಿಸುವಲ್ಲಿ ಯಶಸ್ವಿಯಾಗಿದೆ. ಇಂತಹ ಪರಿಕಲ್ಪನೆಗೆ ಬೆಳೆಯುತ್ತಿರುವ ಮಂಗಳೂರಿಗೆ ಅನಿವಾರ್ಯ.

ಹಂಪನಕಟ್ಟೆ ಹಳೆ ಬಸ್‌ ನಿಲ್ದಾಣದ ಜಾಗದಲ್ಲಿ ಮಲ್ಟಿ ಲೆವೆಲ್‌ ಕಾರ್‌ ಪಾರ್ಕಿಂಗ್‌ ಯೋಜನೆಯನ್ನು ಸ್ಮಾರ್ಟ್‌ಸಿಟಿಯಲ್ಲಿ ಕೈಗೆತ್ತಿಕೊಳ್ಳಲಾಗಿದೆ. ಈಗಾಗಲೇ ಇದರ ಟೆಂಡರ್‌ ಪೂರ್ಣಗೊಂಡು ಕಾಮಗಾರಿ ಆರಂಭಿಸಲು ಸೂಚನೆ ನೀಡಲಾಗಿದೆ. ಸದ್ಯ ಹಂಪನಕಟ್ಟದಲ್ಲಿ ಸ್ಮಾರ್ಟ್‌ಸಿಟಿ ಕಾಮಗಾರಿಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಾರ್‌ ಪಾರ್ಕಿಂಗ್‌ ಕಾಮಗಾರಿಯನ್ನೂ ಕೂಡ ಒಮ್ಮೆಲೆ ಮಾಡಿದರೆ ಮತ್ತಷ್ಟು ಸಮಸ್ಯೆ ಆಗಬಹುದು ಎಂಬ ಕಾರಣದಿಂದ ಈ ಕಾಮಗಾರಿ ಪೂರ್ಣವಾದ ಬಳಿಕ ಪಾರ್ಕಿಂಗ್‌ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುವುದು. ಅಕ್ಷಯ್‌ ಶ್ರೀಧರ್‌,  ಆಯುಕ್ತರು, ಮನಪಾ 

Advertisement

Udayavani is now on Telegram. Click here to join our channel and stay updated with the latest news.

Next