Advertisement

ಧರ್ಮಸ್ಥಳ: ಮಾಹಿತಿ ಕಚೇರಿ ಬಳಿ ನಿಲ್ಲಿಸಿದ್ದ ಬೈಕ್‌ ಕಳವು

09:59 PM Feb 17, 2023 | Team Udayavani |

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದ ಜೋಡು ಸ್ಥಾನ ನಿವಾಸಿ ಅಭಿಜಿತ್‌ ಎಂಬವರು ಧರ್ಮಸ್ಥಳ ಮಾಹಿತಿ ಕಚೇರಿ ಬಳಿ ಇರಿಸಿದ್ದ ಬೈಕನ್ನು ಕಳವು ಮಾಡಿದ ಘಟನೆ ಫೆ.13ರಂದು ನಡೆದಿದೆ.

Advertisement

ಅಭಿಜಿತ್‌ ಅವರು ಬಾಡಿಗೆ ಆಟೋ ಚಾಲಕರಾಗಿದ್ದು, ಅಂದು ರಾತ್ರಿ ಆಟೋ ಬಾಡಿಗೆ ಮಾಡಿ ಮರುದಿನ ಫೆ.14ರಂದು ಬೆಳಗ್ಗೆ 7.30 ಗಂಟೆಗೆ ಮನೆಗೆ ಹೋಗಲು ಬೈಕ್‌ ಇಟ್ಟ ಸ್ಥಳದಲ್ಲಿ ಬಂದು ನೋಡಿದಾಗ ಬೈಕ್‌ ಕಾಣೆಯಾಗಿರುವುದು ಗಮನಕ್ಕೆ ಬಂದಿದೆ. ಕಾಣೆಯಾದ ಮೋಟಾರ್‌ ಸೈಕಲ್‌ನ ಅಂದಾಜು ಮೌಲ್ಯ 20,000 ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಇದನ್ನೂ ಓದಿ: ಚಾರ್ಮಾಡಿ ಘಾಟಿಯಲ್ಲಿ ಪಿಕಪ್‌ ವಾಹನದ ಬ್ರೇಕ್‌ಫೈಲ್‌… ತಪ್ಪಿದ ಭಾರಿ ಅನಾಹುತ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next