Advertisement

ಪರೇಶ ಮೇಸ್ತಾ ಪ್ರಕರಣ; ಅಮಾಯಕರ ಮೇಲಿನ ಕೇಸುಗಳು ವಾಪಸ್

09:44 PM Feb 20, 2023 | Team Udayavani |

ಶಿರಸಿ: ಪರೇಶ ಮೇಸ್ತಾ ಸಾವಿನ‌ ಪ್ರಕರಣದ ಬಳಿಕ‌ ನಡೆದ ಘಟನೆಯಲ್ಲಿ ಶಿರಸಿಯಲ್ಲಿ ಅಮಾಯಕರ ಮೇಲೆ ದಾಖಲಾಗಿದ್ದ ಪ್ರಕರಣಗಳನ್ನು ರಾಜ್ಯ ಸರಕಾರ ವಾಪಸ್ ಪಡೆದಿದೆ.

Advertisement

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಪ್ರಕರಣ ವಾಪಸ್ ಪಡೆದದುಕ್ಕಾಗಿ ಸರಕಾರವನ್ನು ಸ್ಪೀಕರ್ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಭಿನಂದಿಸಿದ್ದಾರೆ.

ಈ ಹಿಂದೆ‌ 26 ಪ್ರಕರಣಗಳನ್ನು ವಾಪಸ್ ಪಡೆಯಲಾಗಿತ್ತು. ಈಗ 112 ಜನರ ಮೇಲೆ ಉಳಿದು ಹೋಗಿದ್ದ 3 ಪ್ರಕರಣ ವಾಪಸ್ ಪಡೆಯಲಾಗಿದೆ. ಇದಕ್ಕೆ ಸಹಕಾರ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ, ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ಕಾಗೇರಿ ಅಭಿನಂದಿಸಿದ್ದಾರೆ ಎಂದು ಸ್ಪೀಕರ್ ಆಪ್ತ ಕಾರ್ಯದರ್ಶಿ ಸುಬ್ರಾಯ ಹೆಗಡೆ ಹಲಸಿನಳ್ಳಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next