Advertisement

Parappana Agrahara Jail: ಹಣ ಕೊಟ್ಟರೆ ಜೈಲಿನಲ್ಲಿ ಸಿಗರೆಟ್‌,ಎಣ್ಣೆ,ಡ್ರಗ್ಸ್‌ ಸಿಗುತ್ತೆ

11:02 AM Aug 27, 2024 | Team Udayavani |

ಬೆಂಗಳೂರು: ದರ್ಶನ್‌ಗೆ ವಿಶೇಷ ಆದ್ಯತೆ ನೀಡಿದ ಬೆನ್ನಲ್ಲೇ ಪರಪ್ಪನ ಅಗ್ರಹಾರದಲ್ಲಿ ನಡೆಯುವ ಅಕ್ರಮಗಳು ಬಯಲಾಗುತ್ತಿದ್ದು, ಪ್ರತಿಯೊಂದು ಸೌಲಭ್ಯಕ್ಕೂ ಜೈಲಿನ ಅಧಿಕಾರಿಗಳ ದರ ನಿಗದಿ ಪಡಿಸಿ ದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಬಿಸಿ ನೀರು, ಎಣ್ಣೆ, ಸಿಗರೆಟು, ಸ್ಪೆಷನ್‌ ಊಟಕ್ಕೆ ಒಂದೊಂದು ದರ ನಿಗದಿ ಪಡಿಸಲಾಗಿದೆ. ಇನ್ನು ಪ್ರಮುಖವಾಗಿ ಜೈಲಿನಲ್ಲಿ ವಸ್ತುಗಳು ಪೂರೈಕೆ ಮಾಡಲು ಒಂದು ತಂಡವೇ ಇದೆ ಎಂದು ಹೇಳಲಾಗಿದೆ.

Advertisement

ಜೈಲಿನಿಂದ ಬಿಡುಗಡೆಯಾದ ಕೈದಿಯೊಬ್ಬರು ಕೆಲವೊಂದು ಅಂಶಗಳನ್ನು ಮಾಧ್ಯಮಗಳ ಮುಂದೆ ಹೊರಹಾಕಿದ್ದಾರೆ. ಜೈಲಿನಲ್ಲಿ ವಸ್ತುಗಳ ಪೂರೈಕೆ ಮಾಡಲು ಪ್ರತ್ಯೇಕ ತಂಡ ಇದೆ. 10 ವರ್ಷಕ್ಕಿಂತ ಹೆಚ್ಚು ಕಾಲ ಇರುವ ಕೈದಿಗಳೇ ಈ ತಂಡದ ಸದಸ್ಯರಾಗಿದ್ದಾರೆ. ಕೈದಿಗಳಿಗೆ ಏನು ನೀಡಬೇಕೆಂದು ಕೈದಿಗಳಿಂದಲೇ ನಿರ್ಧಾರ ಮಾಡಲಾಗುತ್ತದೆ. ಈ ತಂಡ ಸೇರುವ ಸ್ವಯಂಸೇವಕ ಹಿರಿಯ ಕೈದಿಗಳಾಗಿದ್ದು, ಹಣ ಕೊಡುವ ಕೈದಿಗಳಿಗೆ ಈ ತಂಡ ಸವಲತ್ತು ನೀಡುತ್ತದೆ.

ಸಿಗರೆಟ್‌, ಊಟ, ಎಣ್ಣೆ, ಫೋನ್‌, ಡ್ರಗ್ಸ್‌ ಹೀಗೆ ಪ್ರತಿಯೊಂದಕ್ಕೂ ದರ ನಿಗದಿ ಪಡಿಸಿದ್ದಾರೆ. ಕೈದಿಗಳಿಂದ ಹಣ ಸಂಗ್ರಹಿಸುವ ಈ ತಂಡ ಕೈದಿಗಳ ಭೇಟಿಗೆ ಆಗಮಿಸುವ್ಯಕ್ತಿಗಳಿಂದ ಫೋನ್‌ ಪೇ, ಬ್ಯಾಂಕ್‌ಗಳಿಂದ ಹಣ ವರ್ಗಾಯಿಸಿಕೊಳ್ಳುತ್ತಾರೆ. ನಾನು ಸೌಲಭ್ಯ ಪಡೆಯಲು ಸುಮಾರು 1.30 ಲಕ್ಷ ರೂ. ಖರ್ಚು ಮಾಡಿದ್ದೆ. ಸೆಂಟ್ರಲ್‌ ಜೈಲಿನ ದಂಧೆಯನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಜೈಲಿನಲ್ಲಿ ಬಡ್ಡಿ ದಂಧೆ ನಡೆಯುತ್ತದೆ. ಸಾವಿರಾರು ರೂ. ಕೊಟ್ಟರೆ ಹುಡುಗಿಯನ್ನೂ ಸಹ ಕಳುಹಿಸುತ್ತಾರೆ ಎಂದು ಸ್ಫೋಟಕ ಅಂಶಗಳನ್ನು ಬಿಚ್ಚಿಟ್ಟಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next