Advertisement

ಪಂಡಿತ್ ಜವಾಹರ್ ಲಾಲ್ ನೆಹರು ಆಧುನಿಕ ಭಾರತದ ನಿರ್ಮಾಣದ ಧೀಮಂತ ನಾಯಕ; BSY

12:25 PM May 27, 2020 | sudhir |

ಬೆಂಗಳೂರು : ದೇಶದ ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂರವರು ಸ್ವತಂತ್ರ ಭಾರತದ ಮೊದಲ ಪ್ರಧಾನಿಯಾಗಿ ಹಾಗೂ ಆಧುನಿಕ ಭಾರತದ ನಿರ್ಮಾಣಕ್ಕೆ ಬುನಾದಿ ಹಾಕಿದ ಧೀಮಂತ ನಾಯಕ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಹೇಳಿದ್ದಾರೆ.

Advertisement

ನಗರದಲ್ಲಿ ಪಂಡಿತ್ ಜವಾಹರಲಾಲ್ ನೆಹರೂ ಅವರ 56 ನೇ ಪುಣ್ಯತಿಥಿಯ ಅಂಗವಾಗಿ ಅವರ ಪ್ರತಿಮೆಗೆ ಗೌರವ ಸಲ್ಲಿಸಿ ಮಾತನಾಡಿದ ಮುಖ್ಯಮಂತ್ರಿಗಳು ಪಂಚವಾರ್ಷಿಕ ಯೋಜನೆಗಳ ಮುಕಾಂತರ 20 ವರ್ಷಗಳ ಪರಿಪೂರ್ಣ ಪ್ರಗತಿ ಸಾಧಿಸಬಹುದೆಂದು ಕನಸು ಕಂಡತಹ ಮಹಾನ್ ನೇತಾರ ಜೊತೆಗೆ ಅದನ್ನು ಸಾಧಿಸುವಲ್ಲಿ ಅನೇಕ ಉಪಕ್ರಮಗಳನ್ನು ಕೈಗೊಡಿದ್ದರು ಎಂದು ಹೇಳಿದರು.

ನೆಹರು ಒಬ್ಬ ಸಾಹಿತಿ ಹಾಗೂ ಇತಿಹಾಸಕರ ಕೂಡ ಆಗಿದ್ದರು, ನೆಹರೂ ಅವರು ಬಳುವಳಿಯಾಗಿ ಬಿಟ್ಟು ಹೋಗಿರುವ ಅಭಿವೃದ್ಧಿ ಪರಿಕಲ್ಪನೆ ಮತ್ತು ರಾಷ್ಟ್ರ ನಿರ್ಮಾಣದ ಮೌಲ್ಯಗಳನ್ನ ನಾವು ಅಳವಡಿಸಿಕೊಳ್ಳುವ ಮೂಲಕ ಪಂಡಿತ್ ಜವಾಹರ್ ಲಾಲ್ ನೆಹರೂ ಅವರಿಗೆ ಶ್ರದ್ಧಾಂಜಲಿ ಅರ್ಪಿಸೋಣ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next