Advertisement

“ಪಂಚತಂತ್ರ’ಗೇಮ್‌ ಬಂತು

05:41 AM Mar 19, 2019 | |

ಯೋಗರಾಜ್‌ ಭಟ್‌ ನಿರ್ದೇಶನದ “ಪಂಚತಂತ್ರ’ ಚಿತ್ರ ಮಾರ್ಚ್‌ 29 ರಂದು ಬಿಡುಗಡೆಯಾಗುತ್ತಿದೆ. ಈಗಾಗಲೇ ಭಟ್ಟರ ತಂಡ ಊರೂರು ಸುತ್ತಿ ಸಿನಿಮಾ ಪ್ರಚಾರ ಮಾಡುತ್ತಿದೆ. ಈಗ ಸಿನಿಮಾವನ್ನು ಜನರಿಗೆ ಮತ್ತಷ್ಟು ಹತ್ತಿರವಾಗಿಸಲು ಹೊಸದೊಂದು ದಾರಿ ಹುಡುಕಿದೆ. ಅಂದು ಪಂಚತಂತ್ರ ಗೇಮ್‌. ಹೌದು, ಇದೀಗ “ಪಂಚತಂತ್ರ’ ಮೊಬೈಲ್‌ ಗೇಮ್‌ ಮೂಲಕ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದೆ. 

Advertisement

ಈ ಚಿತ್ರದಲ್ಲಿ ಕಾರ್‌ ಹಾಗೂ ಬೈಕ್‌ ರೇಸ್‌ ಹೈಲೈಟ್‌. ಹಾಗಾಗಿ, ಅದನ್ನೇ ಇಟ್ಟುಕೊಂಡು ಗೇಮ್‌ ಮಾಡಿ ಪ್ಲೇ ಸ್ಟೋರ್‌ಗೆ ಬಿಟ್ಟರೆ ಹೇಗೆ ಎಂಬ ಆಲೋಚನೆ ಬಂದ ಕೂಡಾ ಕೂಡಲೇ ಗೇಮ್‌ ಸಿದ್ಧಪಿಡಿಸಿ ಅದನ್ನು ಅಪ್‌ಲೋಡ್‌ ಮಾಡಲಾಗಿದೆ. ಇಲ್ಲಿ ಚಿತ್ರದ ಪಾತ್ರಧಾರಿಗಳೇ ಸ್ಫರ್ಧಿಗಳು. ಜೊತೆಗೆ ಚಿತ್ರದ ಕಂಟೆಂಟ್‌ ಸಹ ಅಲ್ಲಲ್ಲಿ ಗೊತ್ತಾಗುತ್ತದೆ.

ಇದು ಪ್ರೇಕ್ಷಕರಿಗೂ ಸಹಾಯವಾಗಬಹುದು ಎನ್ನುವುದು ಚಿತ್ರತಂಡ ಮಾತು. ಅಂದಹಾಗೆ, ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ “ಹೊಂಗೆ ಮರ’ ಹಾಗೂ “ಬ್ಯಾಡ ಹೋಗು ಅಂದ್ಬುಟ್ಳು’ ಹಾಡು ದೊಡ್ಡ ಮಟ್ಟದಲ್ಲಿ ಹಿಟ್‌ ಆಗಿದೆ. ಸಿನಿಮಾವನ್ನು ಅದೇ ರೀತಿ ಜನ ಇಷ್ಟಪಡುತ್ತಾರೆಂಬ ವಿಶ್ವಾಸ ಚಿತ್ರತಂಡಕ್ಕಿದೆ.

ಭಟ್ರು ಜನರೇಶನ್‌ ಗ್ಯಾಪ್‌ ಇಟ್ಟುಕೊಂಡು ಈ ಸಿನಿಮಾ ಮಾಡುತ್ತಿದ್ದು, ಇಂದಿನ ಯುವಜನತೆ ಹಾಗೂ ಹಿರಿಯರ ನಡುವೆ ಯಾವ ತರಹದ ಗ್ಯಾಪ್‌ ಇದೆ ಮತ್ತು ಮನಸ್ಥಿತಿಗಳು ಹೇಗೆ ಬದಲಾಗಿವೆ ಎಂಬ ಅಂಶದೊಂದಿಗೆ ಈ ಸಿನಿಮಾ ಮಾಡುತ್ತಿದ್ದಾರೆ. ಒಂದರ್ಥದಲ್ಲಿ ಕಾಮಿಡಿ ಹಿನ್ನೆಲೆಯಲ್ಲಿ ಭಟ್ರು ಫಿಲಾಸಫಿ ಹೇಳಲು ಹೊರಟಿದ್ದಾರೆಂದರೆ ತಪ್ಪಲ್ಲ. ಚಿತ್ರದಲ್ಲಿ ವಿಹಾನ್‌, ಸೋನಾಲ್‌, ಅಕ್ಷರ ಸೇರಿದಂತೆ ಅನೇಕರು ನಟಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next