Advertisement

National Tourism Day: ಕಣ್ಮನ ಸೆಳೆಯುವ ತಾಣ ಪಂಚಮಿಕಲ್ಲು

02:55 PM Jan 25, 2024 | Team Udayavani |

ಹಸುರ ಕಾನನದ ಮಧ್ಯೆ ಕಂಗೊಳಿಸುವ ಮಲೆನಾಡ ಸೊಬಗನ್ನು ಆಸ್ವಾದಿಸಲು ಎಲ್ಲ ಪ್ರವಾಸಿ ಪ್ರಿಯರಿಗೂ ಬಲು ಇಷ್ಟನೇ. ಕಾಫಿ-ಚಹಾ ತೋಟಗಳ ಸ್ವಾದ, ಬೆಟ್ಟ ಗುಡ್ಡಗಳ ರಮಣೀಯ ನೋಟ, ಅಲ್ಲಲ್ಲಿ ಕಾಣ ಸಿಗುವ ಜಲಪಾತಗಳ ಸಿಂಗಾರದ ಜತೆಗೆ ಇಳಿಜಾರು ಪ್ರದೇಶಗಳು, ಹೀಗೆ ನಾನಾ ರೀತಿಯಾದ ಪ್ರದೇಶಗಳನ್ನು ಮಲೆನಾಡ ಸೀಮೆಯಲ್ಲಿ ಕಾಣಬಹುದು.

Advertisement

ಮಲೆನಾಡಿನಲ್ಲಿ ಚಾರಣಕ್ಕೆಂದೇ ಹೇಳಿ ಮಾಡಿಸಿದ ಅಸಂಖ್ಯ ತಾಣಗಳಿವೆ. ಪ್ರತಿಯೊಂದು ತಾಣವೂ ಪ್ರಕೃತಿ ಸೌಂದರ್ಯದಿಂದ ಸಂಪತ½ರಿತವಾಗಿದೆ. ಮಳೆಗಾಲದಲ್ಲಿ ಮಲೆನಾಡ ಸೌಂದರ್ಯವು ಮೈವೆತ್ತಂತೆ ಇಲ್ಲಿನ ಜಲಧಾರೆಗಳು ಧುಮ್ಮಿಕ್ಕಿ ಹರಿಯುವುದನ್ನು ನೋಡುವುದೇ ಸೊಗಸು. ಬೆಟ್ಟ-ಗುಡ್ಡಗಳು ಸುರಿವ ಮಳೆಯ ನಡುವೆ ಹಸುರುಟ್ಟು ಶೋಭಿಸುತ್ತಿವೆ.

ಇದೇ ಕಾರಣಕ್ಕೆ ಚಾರಣಿಗರು ಮಳೆಗಾಲದಲ್ಲಿ ಮಲೆನಾಡಿನ ಸೊಬಗನ್ನು ಮಿಸ್‌ ಮಾಡಿಕೊಳ್ಳುವುದಿಲ್ಲ. ಮಲೆನಾಡಿನ ಮೂಲೆ-ಮೂಲೆ ಜಾಲಾಡದೆ ಅವರು ತೃಪ್ತಿಪಡುವುದಿಲ್ಲ. ಇಂಥ ಚಾರಣಿಗರು ಚಾರಣದ ಸವಿಯನ್ನು ಮನಸಾರೆ ಅನುಭವಿಸಲು ಹೇಳಿ ಮಾಡಿಸಿದ ಹೊಚ್ಚ ಹೊಸ ತಾಣ ಪಂಚಮಿ ಕಲ್ಲು.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಮೇಗುಂದ ಗ್ರಾಮದಲ್ಲಿ ಕಾಣಸಿಗುವ ಪ್ರವಾಸಿ ತಾಣವೇ ಪಂಚಮಿ ಕಲ್ಲು. ಅಂಕುಡೋಂಕಾದ ದಾರಿಯಲ್ಲಿ ಸಾಗಿದಾಗ ಸುಂದರವಾದ ಬೆಟ್ಟ ಗುಡ್ಡಗಳಿಂದ ಸುತ್ತುವರೆದು, ಬೆಟ್ಟದ ತುತ್ತ ತುದಿಯಲ್ಲಿ ಒಂದು ಸುಂದರ ಸ್ಮಾರಕವು ಕಾಣಸಿಗುತ್ತವುದು, ಅದೇ ಪಂಚಮೀ ಕಲ್ಲು. ಇದು ಜೈನ ಧರ್ಮದವರಿಗೆ ಸಂಬಂಧಿಸಿದ ತಾಣವಾಗಿದ್ದು. ಈ ಜೈನ ಸ್ಮಾರಕವು ಹಲವಾರು ವರ್ಷಗಳಿಂದ ಅಸ್ತಿತ್ವದಲ್ಲಿದೆ.

ಧ್ಯಾನಕ್ಕಾಗಿ ಜೈನ ಸಂತರ ವಿಹಾರ ತಾಣವಾಗಿದ್ದು, ಹೆಸರೇ ಸೂಚಿಸುವಂತೆ ಈ ರಚನೆಯು ದೊಡ್ಡದಾದ ಕಲ್ಲಿನ ಮೇಲೆ ಚಿಕ್ಕದಾದ ಕಲ್ಲಿನ ಗೋಪುರದಿಂದ ನಿರ್ಮಿಸಲ್ಪಟ್ಟಿದೆ. ಪಂಚಮಿ ಕಲ್ಲು ಎಂಬ ಪ್ರವಾಸಿ ತಾಣವು ಪ್ರಸುತ್ತ ದಿನಗಳಲ್ಲಿ ಸದ್ದಿಲ್ಲದೆ ಸದ್ದು ಮಾಡುತ್ತಿದೆ. ಅಧಿಕ ಸಂಖ್ಯೆಯಲ್ಲಿ ಪ್ರವಾಸಿಗರು ಈ ಜಾಗಕ್ಕೆ ಇತ್ತೀಚಿನ ದಿನಗಳಲ್ಲಿ ಭೇಟಿ ನೀಡುತ್ತಿದ್ದು, ಹಾಗಾಗೀ ಬೆಟ್ಟದ ಮೇಲಿರುವ ಸುಂದರವಾದ ಕಲ್ಲಿನ ಮಂಟಪವು ನೋಡುಗರ ಕಣ್ಮನ ಸೆಳೆಯುತ್ತಿದೆ.

Advertisement

ಇತಿಹಾಸ ಲಭ್ಯವಿರುವ ಶಾಸನದ ಉಲ್ಲೇಖಗಳ ಆಧಾರದ ಮೇಲೆ ಈ ದೇವಾಲಯವು, 15ನೇ ಶತಮಾನದ ಅಂದರೆ ವಿಜಯನಗರ ಅವಧಿಯಂದು ಎಂದು ತಿಳಿದುಬರುತ್ತದೆ. ಮೇಗುಂದದಲ್ಲಿ ಅಂದರೆ ಪಂಚಮಿಕಲ್ಲು ಇಲ್ಲಿ 2 ಶಾಸನಗಳು ಕಂಡು ಬರುತ್ತವೆ, ಅವುಗಳು ದೀಪಾವಳಿ ಹಬ್ಬವನ್ನು ನಿಯಮಿತವಾಗಿ ನಡೆಸಲು ಈ ದೇವಾಲಯದಲ್ಲಿರುವ ಶಾಂತಿ ನಾಥ ಮತ್ತು ಪಾಶ್ವನಾರ್ಥ ತೀರ್ಥಂಕರ ವಿಗ್ರಹಗಳಿಗೆ ನೀಡಿದ ಭೂದಾನದ ವಿವರಗಳನ್ನು ಒಳಗೊಂಡಿದೆ. ಪರ್ಯಂಕಾಸನದಲ್ಲಿ ಸುಮಾರು 3 ಅಡಿ ಎತ್ತರದ ಕಪ್ಪು ಬಣ್ಣದ ಕಲ್ಲಿನ ವಿಗ್ರಹವು ಅಲ್ಲಿನ ಮುಖ್ಯ ದೇವತೆ ಎಂದೂ ಕರೆಯುತ್ತಾರೆ.

ದೇವಾಲಯದ ರಚನೆ

ದೇವಾಲಯದ ಪ್ರವೇಶದ್ವಾರದಲ್ಲಿ ಚತುರ್ಮುಖ ತೀರ್ಥಂಕರ ವಿಗ್ರಹದೊಂದಿಗೆ ಸುಮಾರು 25 ಅಡಿ ಎತ್ತರದ ಮಾನಸ್ತಂಭವನ್ನು ಸ್ತಾಪಿಸಲಾಗಿದೆ. ಮಾನಸ್ತಂಭದ ತಳಹದಿಯ ಉದ್ದಕ್ಕೂ ಎಲ್ಲ 4 ದಿಕ್ಕಿನಲ್ಲೂ ಕುದುರೆ ಬ್ರಹ್ಮ ಯಕ್ಷಗಳ ಸವಾರಿ ಮಾಡುತ್ತಿರುವ ವಿಗ್ರಹಗಳನ್ನು ಗೋಡೆ ಮೇಲೆ ಕೆತ್ತಲಾಗಿದೆ. ಈ ದೇವಾಲಯವು ಸಂಪೂರ್ಣವಾಗಿ ಕಲ್ಲಿನಿಂದ ನಿರ್ಮಿಸಲಾಗಿದೆ. ದೇವಾಲಯವನ್ನು ಪ್ರವೇಶಿಸಿದ ಕೂಡಲೇ ಸುಮಾರು 15 ಅಡಿ ಉದ್ದದ ಹಾದಿ ಸಿಗುತ್ತದೆ. ಅದರ ಅನಂತರ ವಿಶಾಲವಾದ ಸಭಾಂಗಣ/ ನವರಂಗಳಂತಹ ಎರಡು ಕಂಬಗಳನ್ನು ಕಾಣಬಹುದು.

ನವರಂಗವು ಆಕರ್ಷಕವಾಗಿ ಛಾವಣಿಯ ರಚನೆಯನ್ನು ಮಾಡಿದೆ. ನವರಂಗನ ಮತ್ತು ಗರ್ಭಗೃಹ ನಡುವೆ ಅಂತರಾಳದಂತಹ ಸಣ್ಣ ಸಭಾಂಗಣವನ್ನು ಕಾಣಬಹುದು. ನವರಂಗದಿಂದ ಅಂತರಾಳಕ್ಕೆ ಹೋಗುವ ದ್ವಾರದಲ್ಲಿ ದ್ವಾರಪಾಲಕಗಳೊಂದಿಗೆ ಅದರ 3 ಬದಿಗಳಲ್ಲಿ 24 ತೀರ್ಥಂಕರ ವಿಗ್ರಹಗಳನ್ನು ಕೆತ್ತಲಾಗಿದೆ. ಅಂತರಾಳವು 4 ಕಂಬಗಳನ್ನು ಹೊಂದಿದೆ ಮತ್ತು ಗಂಧಕುಟಿಯನ್ನು ಹೊಂದಿದೆ ಬಾಗಿಲಿನ ಸುತ್ತಲೂ ಕಮಾನಿನಂತಹ ಆಯತಾಕಾರದ ರಚನೆಯು ಗರ್ಭಗೃಹಕ್ಕೆ ಕಾರಣವಾಗುತ್ತದೆ.

ಈ ಕೋಶಗಳಲ್ಲಿ ಸಣ್ಣ ಜೈನ ವಿಗ್ರಹಗಳನ್ನು ಇರಿಸಲಾಗಿದೆ. ಗಂಧಕುಟಿಯಲ್ಲಿ ಸಣ್ಣ ಜೈನ ವಿಗ್ರಹಗಳನ್ನು ಕೆತ್ತಲಾಗಿದ್ದು, ಅಂತರಾಳದಲ್ಲಿ ಇನ್ನೂ ಅನೇಕ ತೀರ್ಥಂಕರರ ವಿಗ್ರಹಗಳು ಮತ್ತು ಪದ್ಮಾವತಿ ಯಕ್ಷಿ ದೇವಿಯ ವಿಗ್ರಹವನ್ನು ಪರ್ಯಾಯಕಾಸನದಲ್ಲಿ ಸ್ಥಾಪಿಸಲಾಗಿದೆ.

ಪಂಚಮಿ ಕಲ್ಲು:- ಮೇಗುಂದದ ಶಾಂತಿನಾಥ ಬಸದಿಯಿಂದ ಸುಮಾರು 3 ಕಿ.ಮೀ ದೂರದಲ್ಲಿ ಸಲ್ಲೇಖನವನ್ನು ಅಭ್ಯಾಸ ಮಾಡುವ ಮೂಲಕ ಸಮಾಧಿಯನ್ನು ಸಾಧಿಸಿದ ಜೈನ ಮುನಿಗಳ 4 ವಿಭಿನ್ನ ಪಾದ/ ಅಡಿ ಅನಿಸಿಕೆಗಳನ್ನು ಹೊಂದಿರುವ ಎತ್ತರದ ಪ್ರದೇಶವನ್ನು ಕಾಣಬಹುದು. ಈ ಸ್ಥಳವನ್ನು ಪಂಚಮಿ ಕಲ್ಲು ಎಂದು ಕರೆಯುತ್ತಾರೆ.

-ಸೌಮ್ಯಾ

ಕಾರ್ಕಳ

 

Advertisement

Udayavani is now on Telegram. Click here to join our channel and stay updated with the latest news.

Next