Advertisement

Panamburu: ವಿದ್ಯಾರ್ಥಿಯ ಮೃತದೇಹ ಪತ್ತೆ

11:03 PM Mar 06, 2024 | Team Udayavani |

ಪಣಂಬೂರು: ಸಮುದ್ರದಲ್ಲಿ ಈಜಾಡುತ್ತಿದ್ದ ವೇಳೆ ರವಿವಾರ ಸಮುದ್ರಪಾಲಾದ ಪೊರ್ಕೋಡಿ ನಿವಾಸಿ ವಿದ್ಯಾರ್ಥಿ ಲಿಖಿತ್‌ (18) ಮೃತದೇಹ ಮೂರು ದಿನಗಳ ಬಳಿಕ ಉಪ್ಪಳ ಠಾಣಾ ವ್ಯಾಪ್ತಿಯ ಮೂಸೋಡಿಯಲ್ಲಿ ಸಮುದ್ರದಲ್ಲಿ ಬುಧವಾರ ಮಧ್ಯಾಹ್ನ ಪತ್ತೆಯಾಗಿದೆ.

Advertisement

ಮೃತದೇಹ ಕೊಳೆತ ಸ್ಥಿತಿಯಲ್ಲಿದ್ದು ಕುತ್ತಿಗೆಯಲ್ಲಿ ಚೈನ್‌, ಒಳ ಉಡುಪು ಆಧಾರದಲ್ಲಿ ಪಣಂಬೂರಿನಲ್ಲಿ ಮುಳುಗಿ ನಾಪತ್ತೆಯಾದ ಲಿಖಿತ್‌ ಮೃತದೇಹ ಎಂದು ಪತ್ತೆ ಹಚ್ಚಲಾಯಿತು.

ಉಪ್ಪಳದ ಮೀನುಗಾರರು ಗಮನಿಸಿ ದಡಕ್ಕೆ ತಲುಪಿಸಿದ್ದು ,ಸ್ಥಳೀಯ ಪೊಲೀಸರು ಮಂಗಲ್ಪಾಡಿ ಸರಕಾರಿ ಆಸ್ಪತ್ರೆಯಲ್ಲಿ ಮಹಜರು ನಡೆಸಿ ಸಂಬಂಧಪಟ್ಟ ಪಣಂಬೂರು ಠಾಣೆಗೆ ಮಾಹಿತಿ ನೀಡಲಾಯಿತು.

ಕಳೆದ ರವಿವಾರ ಜನಪದ ಪರಿಷತ್‌ ರಸಮಂಜರಿ ಕಾರ್ಯಕ್ರಮ ವೀಕ್ಷಣೆಗೆ ಬಂದಿದ್ದ ಪೊರ್ಕೋಡಿಯ ಸ್ನೇಹಿತರಾದ ನಾಗರಾಜ್‌ (24),ಮಿಲನ್‌ (20) ಹಾಗೂ ಲಿಖಿತ್‌ ಸಮುದ್ರದಲ್ಲಿ ಈಜಾಟ ನಡೆಸುತ್ತಿದ್ದರು. ಸಂಜೆಯ ವೇಳೆ ಸಮುದ್ರ ಪ್ರಕ್ಷುಬ್ದಗೊಂಡಿದ್ದು, ಭಾರೀ ಗಾಳಿಯೊಂದಿಗೆ ಅಲೆಗಳು ಅಪ್ಪಳಿಸಿ ಮೂವರೂ ಮುಳುಗಿ ನಾಪತ್ತೆಯಾಗಿದ್ದರು.

ತತ್‌ಕ್ಷಣ ಹುಡುಕಾಟ ನಡೆಸಲಾಯಿತಾದರೂ ಪತ್ತೆಯಾಗಲಿಲ್ಲ. ಮಾ. 4ರಂದು ಬೆಳಗ್ಗೆ ನಾಗರಾಜ್‌, ಮಿಲನ್‌ ಮೃತದೇಹ ಪಣಂಬೂರಿನಲ್ಲಿ ದೊರಕಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next